Archive for the ‘ಕನ್ನಡ-Kannada’ Category

ಅಧ್ವೈತವಾದದ ಭ್ರಮೆ

Wednesday, December 3rd, 2014

‘ಎಲ್ಲೆಡೆ ದೇವರು, ಎಲ್ಲವೂ ದೇವರು’ ಎಂಬ ಪುರಾತನ ಗಾದೆಮಾತು, ಮೂರು ಮಸ್ಕಿಟಿಯರ್ಸ್ ಹೇಳುವ ‘ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬ’ ಎಂಬ ಮಾತಿನಂತೆ ಬಹಳ ಅರ್ಥಪೂರ್ಣವಾಗಿದೆ. ಇದು ಆಧ್ಯಾತ್ಮಿಕವಾಗಿ ದೇವರ ಚರ್ಯೆಯನ್ನು ವಿವರಿಸುತ್ತದೆ. ಇದು ಪ್ರಾಯೋಗಿಕವಾಗಿ, ಮೂಲಭೂತವಾಗಿಯೂ ವಿವಿಧ ಸ್ಥರಗಳಲ್ಲಿ ಅಸಂಬದ್ಧ ಮತ್ತು ಸರಿಪಡಿಸಲಾಗದ್ದು ಎಂಬುದಾಗಿ ಗೋಚರಿಸುತ್ತದೆ.

ಮೊದಲನೆಯದಾಗಿ, ಆದ್ಯಂತ ರಹಿತ ದೇವರಿಗೆ ಎಲ್ಲವೂ ಆಗಲು ಹೇಗೆ ಸಾಧ್ಯ? ಭ್ರಷ್ಟಾಚಾರದಲ್ಲಿಯ ಅನಂತತೆ ಅಥವಾ ದೇವರ ಮೂಲತತ್ವಕ್ಕೆ ವಿರುದ್ಧವಾಗಿ, ಸೀಮಿತ ಪರಿಧಿಯ ವಸ್ತುಗಲು ಇರಲು ಹೇಗೆ ಸಾಧ್ಯ? ಇನ್ನೂ ಹೇಳುವುದಾದರೆ, ದೇವರ ಪರಿಪೂರ್ಣ ವ್ಯಕ್ತಿತ್ವ ಇರುವಾಗ, ವಿವಿಧ ವಿಛಿದ್ರ ಮನಸ್ಸುಗಳು ಸಮಾಜವನ್ನು ಹಾಳುಮಾಡುವ ಪರಿಸ್ಥಿತಿ ಇರಲು ಹೇಗೆ ಸಾಧ್ಯ? ಈ ನೈಜತೆ ಬರೀಯ ಭ್ರಮೆಯೇ? ದೇವರು ಈ ದುಷ್ಟಶಕ್ತಿಗಳಿಗಿಂತ ಕಡಿಮೆ ಪ್ರಭಾವ ಹೊಂದಿದ್ದಲ್ಲಿ, ದೇವರು ಅನಂತವಲ್ಲ.

ಅಂತೆಯೇ, ಈ ಅಸಾಂಗತ್ಯ ಇರುವವರೆಗೆ, ಸಂಸಾರ ರಥ ಎಂಬ ವ್ಯವಸ್ಥೆಯಲ್ಲಿ ನಿರಾಸೆಗೊಂಡವರು ಮತ್ತೊಮ್ಮೆ ಜೀವನ ಪಡೆಯಬಹದು ಎಂಬ ಭರವಸೆ ಇಡಬಹುದು. ಇಂದಿನ ಜನಸಂಖ್ಯಾ ಸ್ಫೋಟದ ಈ ವಾಸ್ತವಿಕತೆಯಲ್ಲಿ, ತಾತ್ಕಾಲಿಕ ಹಾಗೂ ಭ್ರಮಾಲೋಕದ ವಸ್ತುಗಳು ಒಂದು ಅತ್ಯದ್ಭುತ ಲೋಕವನ್ನು ಸೃಷ್ಟಿಸಲು ಹೊರಟಿವೆಯೇ?

ಸರ್ವದೇವತಾರಾಧನೆ ವಿಚಾರವಾಗಿ ಇರುವ ಇನ್ನೊಂದು ಗೊಂದಲವೆಂದರೆ, ಅನಂತ ಅಥವಾ ಪರಿಪೂರ್ಣ ದೇವರ ಕಲ್ಪನೆ ಅನೈತಿಕವಾಗಿ ಆದರೆ ಮಾನವೀಯತೆಯೇ ದೇವರು ಎಂಬ ಕಳಕಳಿಯ ಕಾರ್ಯಗಳು ಎಂಬಂತೆ ಚಿತ್ರಿಸಲ್ಪಟ್ಟಿದೆ. ಈ ದೊಡ್ಡ ಮಟ್ಟದ ಅನೈತಿಕತೆಯು ಕಡಿಮೆ ಮಟ್ಟದ ನೈತಿಕತೆಯನ್ನು ದೀವಾಳಿಯನ್ನಾಗಿಸಿದೆ. ನೀತಿಪ್ರಜ್ಞೆರಹಿತ ಹಿಂದೂಗಳು ಉಳಿದವರ ಮೆಲೆ ದಬ್ಬಾಳಿಕೆ ನಡೆಸಿ ಕೊನೆಗೆ ಅನೈತಿಕತೆಯನ್ನೇ ಪಡೆಯುತ್ತಿದ್ದಾರೆ. ಇದು ಅವರ ಸರ್ವದೇವತಾರಾಧನೆಯ ಪ್ರವೃತ್ತಿಯಾಗಿರುವುದು ಖೇದಕರ. ವಾಸ್ತವಿಕ ನೆಲೆಗಟ್ಟಿನಲ್ಲಿ ಹೇಳುವುದಾದರೆ, ಇಂತಹ ಲೋಕೋಪಕಾರದ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ನಾಗರೀಕತೆ, ಸಂಸ್ಕೃತಿ, ಸಮಾಜಕ್ಕೆ ಅಪಾಯಕಾರಿಯಾಗಿರುವ ಇಂತಹ ಅನೈತಿಕತೆಯನ್ನು ತುಲನೆ ಮಾಡುವುದು ಅಸಾಧ್ಯ. ನಿರ್ವಾಣ ಅಥವಾ ಮೋಕ್ಷಕ್ಕೆ ಸಾಗುವ ಅವರ ಶಾಸ್ತ್ರಗಳು ಈ ಎಲ್ಲಾ ಕಾರಣಗಳ ಆಧಾರದಲ್ಲಿ ಪರಮರ್ಶಿಸಿದಾಗ ಅಸಂಬದ್ಧವಾಗಿ ಗೋಚರಿಸುತ್ತದೆ, ಮಾತ್ರವಲ್ಲ ಅವರು ತಮ್ಮ ದಿನಚರಿಯನ್ನು ಮೌಲ್ಯಯುತವಾಗಿ ಹೇಗೆ ಪೂರ್ಣಗೊಳಿಸಬಲ್ಲರು ಎಂದು ಆಶ್ಚರ್ಯವಾಗುತ್ತದೆ. ನೈತಿಕ ವಿಲಕ್ಷಣತೆಗಳು ಭ್ರಮೆಯಾಗಿರಲು ಹೇಗೆ ಸಾದ್ಯ? ಇವು ಅರ್ಥವಿಲ್ಲದವುಗಳು. ಮತ್ತು ಈ ವಸ್ತುಗಳನ್ನು ನಿಗೂಢವಾಗಿ ಅರ್ಥಪೂರ್ಣಗೊಳಿಸುವ ಕಾರ್ಯ ನಡೆಯುತ್ತಿದೆ. ಇದು ಅಂತಿಮ ಸತ್ಯಕ್ಕಿಂತ ಜಾದೂ ಆಗಿ ಗೋಚರಿಸುತ್ತದೆ. ಅಡಾಲ್ಪ್ ಹಿಟ್ಲರ್ ಹಾಗೂ ಮದರ್ ತೆರೆಸಾ ಕಾರ್ಯಗಳನ್ನು ಸಮೀಕರಿಸಬೇಕಾಗಿಲ್ಲ. ಅಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ದೇವರನ್ನು ದೂರಬಹುದಷ್ಟೆ. ಯಾವ ಆಸ್ತಿಕ ಮೌಲ್ಯಯುತ ಜೀವನವನ್ನು ಬಾಳುತ್ತಿದ್ದಾನೆ? ನೈತಿಕತೆಯನ್ನು ಧಿಕ್ಕರಿಸಿ ನಿಂತಿರುವ ಇಂತಹ ವ್ಯಕ್ತಿಗಳು ಜಗತ್ತಿನ ನ್ಯಾಯ ಕಟಕಟೆಯಲ್ಲಿ ನೈಜತೆಯನ್ನು ಸರಿ ಅಥವಾ ತಪ್ಪು ಎಂದು ಅರ್ಥೈಸಿಕೊಳ್ಳಬಲ್ಲನೆ? ಗೆಳೆಯನೊಬ್ಬ ಉಡುಗೊರೆ ನೀಡವುದಕ್ಕೂ, ಕಳ್ಳನೊಬ್ಬ ಅದನ್ನು ಕದಿಯುವುದಕ್ಕೂ ಏನೂ ವ್ಯತ್ಯಾಸವಿಲ್ಲ. ಯಾಕೆಂದರೆ ಇಬ್ಬರೂ ಸುಳ್ಳರು ಅಥವಾ ನಂಬಿಕೆ ಅನರ್ಹರು. ನ್ಯಾಯವೇ ಇಲ್ಲದ ದಬ್ಬಾಳಿಕೆಯ ಜಗತ್ತಿನಲ್ಲಿ ನೈತಿಕ ಪರಿಧಿಯಿಲ್ಲದೆ ಬಾಳುವ ಸಮಾಜವನ್ನು ಊಹಿಸಲು ನಿಮ್ಮಿಂದ ಸಾಧ್ಯವೇ? ಮೂಲತಃ ಈ ಆಸ್ತಿಕವಾದಿಗಳು, ತುಂಬಾ ಮೌಲ್ಯಯುತವಾದ, ನೈಜವಾದ ಸಮಾಜಕ್ಕೆ ಅಗತ್ಯವಾದ ವಿಷಯವೊಂದಿದೆ ಎಂಬುದನ್ನು ಅರಿತಿದ್ದಾರೆ. ಅದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗತ್ತಿಲ್ಲ. ಕರ್ಮ ಸಿದ್ಧಾಂತದ ಮೌಲ್ಯಗಳ ಪ್ರಕಾರ ಸಾವಿನ ನಂತರ ಉಳಿಯುವುದು ಸಮಾಧಿ ಮಾತ್ರ. ಹಿಂದೂ ನಂಬಿಕೆಗಳ ಪ್ರಕಾರ, ಅನೈತಿಕತೆಯ ವಿಚಾರಗಳನ್ನು ಕೂಡ ಅರಿತುಕೊಳ್ಳುವುದು ಮುಖ್ಯ. ಯಾಕೆಂದರೆ ಅದು ಜಗತ್ತಿನ ನೈತಿಕ ವಿಚಾರಗಳಿಗೆ ಧಕ್ಕೆ ಉಂಟುಮಾಡುತ್ತವೆ. ಕೊನೆಯದಾಗಿ, ಇದರ ಆಧಾರದಲ್ಲಿ ಹಿಂದೂಗಳು ಅನೈತಿಕರು ಎಂದು ನಾನು ಹೇಳಲಾರೆ. ಆದರೆ ನಾನಿಲ್ಲಿ ಹೇಳಲು ಪ್ರಯತ್ನಿಸುತ್ತಿರುವುದು ಇಷ್ಟೆ. ತಮಗೆ ತೋಚಿದಂತೆ ವರ್ತಿಸುವ ಹಕ್ಕು ಅವರಿಗಿಲ್ಲ. ಇದು ಭ್ರಮೆಯ ಪರಮಾವಧಿ ಮತ್ತು ತಮ್ಮ ನಂಬಿಕೆಗಳನ್ನು ಪೋಷಿಸುವ ಸಲುವಾಗಿ ತಮ್ಮದೇ ವಿಚಾರಗಳನ್ನು ಬಿಡುವ ಮೂಲಕ ತಮ್ಮ ಜೀವನಶೈಲಿಯನ್ನೇ ಗುರುತರವಾಗಿ ಹಾಳುಮಾಡಿಕೊಂಡಿದ್ದಾರೆ. ಅಂತಿಮವಾಗಿ ಹೇಳುವುದಾದರೆ, ದೇವರು ಅನೈತಿಕ ಎಂಬ ಪರಿಕಲ್ಪನೆ ಮಾಡುವವರು ಸಮಾಜಿಕ ವಿಕೃತಿಯುಳ್ಳವರಿಗೆ ಸಮಾನರು.

ಇನ್ನೊಂದು ವಿಚಾರವೆಂದರೆ, ಆಸ್ತಿಕವಾದಿಗಳು ಎ ಮತ್ತು ಎ ಅಲ್ಲದವ ಇಬ್ಬರೂ ಸಮಾನರು ಎಂಬ ವಿಚಾರವನ್ನು ಮುಂದಿಟ್ಟು, ಕಾರಣ ಹಾಗೂ ಲೆಕ್ಕಾಚಾರಗಳನ್ನು ತಿರಸ್ಕರಿಸುತ್ತಾರೆ. ಅವರ ದಿನಚರಿ ಈ ನಂಬಿಕೆಯ ಮೇಲೆ ನಡೆಯುವುದಿಲ್ಲ. ಅಥವಾ ಸರಿ ಮತ್ತು ತಪ್ಪನ್ನು ನಿರೂಪಿಸುವ , ನೈಜತೆ ಹಾಗೂ ಭ್ರಮಾಲೋಕವನ್ನು ವಿವರಿಸುವ ದ್ವಿರೂಪತೆಯನ್ನು ತಿಳಿಯಪಡಿಸುವ ತತ್ವವನ್ನು ಕೂಡ ಅವರು ಪಾಲಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಉದಾಹರಣೆಗಳನ್ನು ತೆಗೆದುಕೊಂಡರೆ, ಅವರ ತತ್ವದಂತೆ, ಮನುಷ್ಯನ ಅಸ್ತಿತ್ವವೇ ಇರುವುದಿಲ್ಲ. ಇರುವ ಒಬ್ಬ ವ್ಯಕ್ತಿ ತಾನು ಇದ್ದೇನೆ ಎಂದು ಹೇಳಿಕೊಳ್ಳಬೇಕಾದ ಪರಿಸ್ಥಿತಿ. ಹಾಗೆಯೇ, ಇದು ಸಮಯ ಅಥವಾ ಜಾಗದ ಮಿತಿಯಲ್ಲಿ ಅನಂತತೆ ವಾಸ್ತವದಲ್ಲಿದೆ ಎಂಬ ಮಾತಿದೆ. ಲೆಕ್ಕಾಚಾರದ ಪ್ರಕಾರ ಅದು ಕೇವಲ ಕಟ್ಟುಕತೆಯಾಗಿದೆ.

ಇನ್ನು ಹೇಳುವುದಾದರೆ, ಆಸ್ತಿಕವಾದಿಗಳು ತಮ್ಮದೇ ನಂಬಿಕೆಗಳನ್ನು ಬಲವಾಗಿ ನಂಬಿಕೊಂಡಿದ್ದರೆ, ಅವರದೇ ಹೇಳಿಕೆಗಳಿಗೆ ಅವರು ಬದ್ಧರಾಗಿ ಅವರನ್ನು ಸಂಶಯದಿಂದ ನೋಡುವಂತೆ ಮಾಡುತ್ತದೆ. ಸೀಮಿತ ವಸ್ತುಗಳ ಲೋಕದಲ್ಲಿ ಯಾರು ಮನಷ್ಯ ಪರಮಪವಿತ್ರ ಎಂದು ನಂಬುತ್ತಾರೆ. ಆದ್ದರಿಂದ, ಅವರು ತಮ್ಮದೇ ವ್ಯವಸ್ಥೆಯನ್ನು ನಂಬುವುದಿಲ್ಲ. ಆ ವಿಚಾರವ್ಯವಸ್ಥೆಯಲ್ಲಿ ಅದರದ್ದೇ ಆದ ಇತಿಮಿತಿಗಳಿದ್ದು, ಮಾನವ ಗುರುಗಳಿಂದ ಹಾಗೂ ಬರಹಗಳಿಂದ ಭ್ರಮಾಲೋಕದ ಮನಸ್ಸುಗಳಾಗಿ ಪರಿವರ್ತಿಸುತ್ತದೆ. ಇದು ಅವರ ಪ್ರಕಾರ, ಭ್ರಮೆಯಾಗಿರಬಹುದು, ಇದು ಇಡೀ ತತ್ವಶಾಸ್ತ್ರ ವ್ಯವಸ್ಥೆಯನ್ನೇ ಸಂಶಯಿಸುತ್ತದೆ. ಮೂಲತಃ ಇದು ಸ್ವಸಾಕ್ಷ್ಯಗಳ ಗಣನೆಯ ಮೇರೆಗೆ ಅನೈಸರ್ಗಿಕ ಮತ್ತು ಅನಿರಂತರವಾಗಿ ನಿತ್ಯಜೀವನದಲ್ಲಿ ಪರಿಣಾಮಕಾರಿಯಾಗಿ ತನ್ನ ಪ್ರಭಾವವನ್ನು ಬೀರುತ್ತಿರುತ್ತದೆ. ಭೌತಿಕ ಜೀವನ ಅಸತ್ಯ ಎಂದು ಹೇಳಲು ಅವರಲ್ಲಿ ಯಾವ ಸಾಕ್ಷ್ಯವಿದೆ? ನೈಸರ್ಗಿಕ ಸತ್ಯಕ್ಕೆ ವಿರುದ್ಧವಾಗಿ ತಮ್ಮ ವಿಚಾರವನ್ನು ದೃಢಪಡಿಸಲು ಅವರು ಯಾವ ವಿಧಾನವನ್ನು ಬಳಸುತ್ತಾರೆ? ರಸ್ತೆಯ ಎರಡೂ ಬದಿಯ ಟ್ರಾಫಿಕ್ ಅನ್ನು ಪರಾಮರ್ಶಿಸದೆ ರಸ್ತೆ ದಾಟುವ ಧೈರ್ಯ ವಾಹನಗಳೆಲ್ಲ ಭ್ರಮೆ ಎಂದು ಹೇಳುವ ಯಾವ ಆಸ್ತಿಕನಿಗಿದೆ? ವೈಜ್ಞಾನಿಕ ಕತೆ ಆಧರಿತ ಭ್ರಮಾಲೋಕದ ಮ್ಯಾಟ್ರಿಕ್ಸ್ ಸಿನಿಮಾಗಿಂತ ಭೌತಿಕ ಸತ್ಯ ಯಾವಾಗಲೂ ನಂಬುವತದ್ದು. ನಾವು ನೈಜವಲ್ಲದ ಲೋಕದಲ್ಲಿ ಬದುಕುತ್ತಿದ್ದೇವೆ ಎಂಬ ಅಂಶವೇ ಕನಸಿನ ಲೋಕವಾಗಿದೆ. ಈ ಎಲ್ಲಾ ಅಸಂಬದ್ಧ ವಿಚಾರಗಳು, ಸಮರ್ಥನೀಯವಲ್ಲ ಮತ್ತು ಅಸಾಮಾನ್ಯವಾದುದು. ಭ್ರಮೆಯನ್ನು ವಿರೋಧಿಸುವುದಕ್ಕಿಂತ ಅದರ ಭ್ರಮೆಯನ್ನು ಅರಿಯುವುದು ಸೂಕ್ತ.

ತತ್ವಶಾಸ್ತ್ರದ ಇನ್ನೊಂದು ನೈಜವಲ್ಲದ ವಿಚಾರವೆಂದರೆ, ಪ್ರತ್ಯೇಕತೆ ಅಥವಾ ವ್ಯಕ್ತಿತ್ವ. ಅದು ಆತ್ಮಸಾಕ್ಷಿ, ಆಶಯ, ಭಾವನೆಗಳು, ಮತ್ತು ಬುದ್ಧಿಶಕ್ತಿ ಮುಂತಾದ ಭ್ರಮೆಗಳಾಗಿದ್ದು, ಅದು ನೈಸರ್ಗಿಕ ವಿಚಾರಗಳಿಗೆ, ದೇವರ ನಿಯಮಗಳಿಗೆ ವಿರುದ್ಧವಾಗಿದೆ. ಮತ್ತು ಕೋಮಸ್ಥಿತಿಯೊಂದನ್ನು ಹೊರತುಪಡಿಸಿ, ಮನುಷ್ಯ ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಾನೆಯೆ? ದೇವರ ಈ ಸರಳೀಕರಣ ವಿಶ್ವವಿಜ್ಞಾನ ಮತ್ತು ಮೂಲಸಂಕಲ್ಪ ಸಿದ್ಧಾಂತದ ಹಿನ್ನಲೆಯಲ್ಲಿ ಸಮ್ಮತವಲ್ಲ. ಈ ಹುಟ್ಟು ಬೆಳವಣಿಗೆ ಸಾವಿನ ಕುರಿತು ಈ ಮೊದಲೇ ವಿವಿಧ ಲೇಖನಗಳಲ್ಲಿ ನಾನು ವಿವರಿಸಿದ್ದೇನೆ.
ನಿರೀಶ್ವರವಾದಿ ಮತ್ತು ನಾಸ್ತಿಕ

ದೇವರು ಒಂದು ಕಲ್ಲು ಅಥವಾ ಮರದ ಅಗೋಚರತೆಯಂತೆ ಕಾಣಿಸುತ್ತಾನೆ. ಏಕೆಂದರೆ ಮಾನವೀಯತೆಯ ಪರಿಕಲ್ಪನೆ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ದೇವನೆಡೆಗಿನ ಚಿತ್ತವನ್ನು ಸೆಳೆಯಲು ಮಹಾಕಾರ್ಯವೇ ಆಗಬೇಕಿದೆ. ಪುನರ್ಜನ್ಮದ ಜೊತೆಯಲ್ಲಿ ಹಿಂದೆ ಸಾಗಿ ಒಬ್ಬ ದೇವರನ್ನು ಕಾಣಲು ಮುಂದೆ ಬರಬೇಕೆನೋ?

ಒಟ್ಟು ದೇವರ ಪರಿಕಲ್ಪನೆಯಲ್ಲಿ ಜಾತಿ ಎಂಬ ವ್ಯವಸ್ಥೆಯ ಮೂಲಕ ಹಿಂದೂಗಳು ಜನರನ್ನು ಹೇಗೆ ವರ್ಗೀಕರಿಸುತ್ತಾರೆ, ದಲಿತರನ್ನು ಮಾನವಸ್ಥರಗಿಂತ ಕೀಳಾಗಿ ಹೇಗೆ ನೋಡಿಕೊಳ್ಳುತ್ತಾರೆ ಎಂಬುದು ಗಂಭೀರ ವಿಚಾರ. ದೇವರ ಪ್ರತಿನಿಧಿಯನ್ನು ಅವಮಾನ ಮಾಡಿದರೆ, ಅದು ನಿಮಗೆ ಅವಮಾನ ಮಾಡಿಕೊಂಡಂತೆ.

ಹಿಂದೂ ಧರ್ಮದ ಇನ್ನೊಂದು ಸಹಿಸಿಕೊಳ್ಳಲೇಬೇಕಾದ ವಿಷಯ ‘ಎಲ್ಲಾ ಮಾರ್ಗಗಳು ದೇವನೆಡೆಗಿನ ದಾರಿ’. ಇದರ ಕುರಿತು ನಾನು ಇನ್ನೊಂದು ಲೇಖನದಲ್ಲಿ ಬರೆದಿರುವೆ. ಅದಾಗ್ಯೂ ರಾಷ್ಟ್ರೀಯವಾದಿ ಹಿಂದೂ ಸಹೋದರರು, ವಿಚಾರಪೂರ್ಣ ತತ್ವಗಳು ಹಾಗೂ ಧರ್ಮಗಳ ವಿರುದ್ಧ ದಂಗೆಯೇಳುವ ಮನಸ್ಥಿತಿ, ಅವರು, ಇದನ್ನು ನಂಬುವ ಅಥವಾ ಸ್ವೀಕರಿಸುವ ವಿಚಾರಕ್ಕಿಂತ, ಅವರ ಸಂಸ್ಕೃತಿಗೇ ಅಪಚಾರ ಎಸಗುವಂತೆ ಕಾಣಿಸುತ್ತದೆ. ಅದಕ್ಕಾಗಿ ಅವರು ಇತರೆ ನಂಬಿಕೆಯ ವ್ಯವಸ್ಥೆಗಳಿಗೆ ದಾಳಿ ಮಾಡುತ್ತಾರೆ.

ಎಲ್ಲಾ ಮಾರ್ಗಗಳು ದೇವನೆಡೆಗಿನ ದಾರಿ

ಅಂತಿಮವಾಗಿ ಒಟ್ಟು ಈ ವಿಧಾನ, ಸರ್ವದೇವತಾರಾಧನೆಯ ನೈಜತೆಯ ಕಡೆಗೆ ಸಾಗಿ, ಇದು ನೈಜವಾಗಿ ಹಿಂದುಳಿದಿರುವಿಕೆಯ ಮರೀಚಿಕೆಯನ್ನು ಅಥವಾ ನೋವಿನೊಂದಿಗೆ, ಬಳಲುವಿಕೆ ಹಾಗೂ ಮರಣದೊಂದಿಗೆ ಸೆಣಸುವ ಜೀವನಕ್ಕೆ ಆಶ್ರಯ ನೀಡುವ ತಂತ್ರವಾಗಿದೆ. ಇದರ ಮೂಲಕ ಒಂದೇ ಚೌಕಟ್ಟಿನಲ್ಲಿ ಎಲ್ಲಾ ಜೀವಗಳಿಗೂ ಆಸರೆ ನೀಡುವ ಸಂಸ್ಥೆಯನ್ನು ಕಟ್ಟುವ ಇರಾದೆಯಿದೆ. ವೃತ್ತಾಕಾರದ ರಂಧ್ರದಲ್ಲಿ ಚೌಕಾಕಾರದ ಲೋಟವನ್ನು ತೂರಿಸುವ ಪ್ರಯತ್ನದಂತೆ ಇದೊಂದು ಒಂದಾಗಿಸುವ, ವೈವಿಧ್ಯಪೂರ್ಣ ಮಂದಗಾಮಿ ಯೋಜನೆಯಾಗಿದೆ. ಸಂಪ್ರದಾಯವಾದಿಗಳು, ಅವಾಸ್ತವಿಕ ಎನ್ನುವ ವಾಸ್ತವ ಸತ್ಯಗಳನ್ನು ಅಸಂಪ್ರದಾಯಿಗಳೆಂದು ಜರಿಯುತ್ತಾರೆ. ಯೇಸುಕ್ರಿಸ್ತರು ಇಂತಹ ಮನಸ್ಥಿತಿಯನ್ನು, ಏನು ಇಲ್ಲ ಎಂದು ನಟಿಸುವ ಕಪಟವೇಷಧಾರಿಗಳು ಎನ್ನುತ್ತಾರೆ.

ಒಟ್ಟು ಈ ಭ್ರಮೆಯ ಪರಿಕಲ್ಪನೆ ಅಥವಾ ಬದುಕಿನ ದ್ವಂದ್ವಗಳನ್ನು ನಕಲು ಮಾಡುವುದು ಒಂದು ಸಮನ್ವಯಕಾರಿ ಮಾರ್ಗವಾಗಿದೆ. ನೀವು ಪ್ರಾಮಾಣಿಕರಾಗಿದ್ದಲ್ಲಿ, ಸತ್ಯ ಅಸತ್ಯಗಳಲ್ಲಿ ಯಾವುದನ್ನು ನಂಬಬೇಕು ಎನ್ನುವ ವಿಚಾರ ನಿಮಗೆ ಗೊತ್ತಿರುತ್ತದೆ. ಪೂರ್ತಿ ಹಿಂದೂ ಸಮಾಜವನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ತಮ್ಮ ಧಾರ್ಮಿಕ ನಂಬಿಕೆಗಳ ಮೂಲಕ ಬೆಳಗಬೇಕಿದ್ದವರು, ಸಮಾಜದ ದೌರ್ಬಲ್ಯವನ್ನು ತಮ್ಮ ಉದ್ದೇಶಕ್ಕೆ ಬಳಸಿದವರೇ ಹೆಚ್ಚು. ವಿಶ್ವದ ಹೆಚ್ಚಿನ ಸಂಖ್ಯೆಯ ಕುಷ್ಠರೋಗಿಗಳು ಹಾಗೂ ಅಂಧರನ್ನು ಹೊಂದಿರುವ ಸಮಾಜ ಅವರಿಗೆ ಯಾವುದೇ ಒಂದು ಸರಿಯಾದ ಮಾರ್ಗವನ್ನು ತೋರಿಸದಿರುವುದು ಅವರ ನಂಬಿಕೆ-ಆಚರಣೆಗಳು ಸರಿಯಾದ ಮಾರ್ಗದಲ್ಲಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ.

ಕೊನೆಯದಾಗಿ ಬೈಬಲ್ ಹೇಳುವ ಪ್ರಾಪಂಚಿಕ ದೃಷ್ಠಿಕೋನವನ್ನು ಹೇಳಲು ಇಚ್ಛಿಸುತ್ತೇನೆ. ಇದು ಕಠುಟೀಕೆಗಳಿಗೆ ಗುರಿಯಾಗಿದ್ದರೂ ಸಹ, ತಾತ್ವಿಕವಾಗಿ ಹಾಗೂ ಐತಿಹಾಸಿಕವಾಗಿ ನಂಬಲಾರ್ಹ, ಸುಸಂಬದ್ಧ , ಸಂಬಂಧಿತ , ಮತ್ತು ತೋರಿಕೆಯ ವ್ಯವಸ್ಥೆಯ ಮೂಲಕ ಜೀವನವನ್ನು ನೈಜತೆಯೆಡೆಗೆ ಸಾಗಿಸುತ್ತದೆ.

ನೈಜತೆಗೆ, ಶಾಶ್ವತ, ಅತೀಂದ್ರಿಯ, ಸರ್ವಶಕ್ತ, ವಿವರಣೆಯನ್ನು ಬಹಿರಂಗವಾಗಿ ಬೈಬಲ್ ನೀಡುತ್ತದೆ. ಮನುಕುಲಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ದೇವನು ಜಗತ್ತಿನ ಲೌಕಿಕ ಹಾಗೂ ಆಧ್ಯಾತ್ಮಿಕವಾಗಿರುವ ಎಲ್ಲಾ ಚರಾಚರಗಳನ್ನು ಸೃಷ್ಟಿಸಿದ್ದಾನೆ. ಮನುಕುಲ ದೇವರ ಚಿತ್ರಣದಿಂದ ರಚಿತವಾಗಿದೆ, ಆದರೆ ಇದುವೇ ದೇವರಲ್ಲ. ಆತನ ಗುಣಗಳನ್ನು ಅಳವಡಿಸಿಕೊಂಡು, ನೈತಿಕ, ಬೌದ್ಧಿಕ ವಿಚಾರಗಳಿಗನುಗುಣವಾಗಿ ಕಲಹರಹಿತ ನೈತಿಕವಾದಿಯಾಗಬಹುದು ಮತ್ತು ಇದಲ್ಲದೆ, ಆತನ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನಗಳನ್ನು, ಮನುಕುಲವನ್ನು ದೇವರನ್ನು ಭಾಗ ಮಾಡುವ ಪಾಪಕಾರ್ಯವನ್ನು ವಿರೋಧಿಸುವ ಕೈಂಕರ್ಯವನ್ನು ಮಾಡಬಹುದು. ಸುವಾರ್ತೆಯೆಂದರೆ, ಸಾರ್ವಭೌಮ ಪ್ರಬಲನಾದ, ಕರುಣಾಮಯಿಯಾದ ದೇವನು ಯೇಸುವನ್ನು ದೇವಮಾನವನಾಗಿ ಈ ಭೂಮಿಗೆ ಕಳುಹಿಸಿದ್ದಾನೆ. ರಕ್ತ-ಮಾಂಸಗಳಿಂದ ರಚಿತವಾದ ಮನುಕುಲವನ್ನು ರಕ್ಷಿಸಿ, ದೇವನೆಡೆಗೆ ಕೊಂಡೊಯ್ಯುವ ಸಮನ್ವಯಕಾರಿ ಹಾಗೂ ಉದ್ಧಾರಕನಾಗಿ ಪ್ರಯತ್ನಪಟ್ಟು ಕೊನೆಗೆ ಮನುಕುಲದ ಸ್ವಾತಂತ್ರ್ಯಕ್ಕಾಗಿ, ಮಾನವನ ಸಮಸ್ಯೆಗಳ ದ್ಯೋತಕವಾದ ಕ್ರಾಸ್ ಗೆ ತನ್ನನ್ನೇ ತ್ಯಾಗಮಾಡಿರುವ ಮಹಾತ್ಮನು. ಈ ನ್ಯಾಯಬದ್ಧ ಮತ್ತು ಬದಲಿ ವಿಧಾನಗಳಿಂದ ದೇವನ ನ್ಯಾಯಪದ್ಧತಿ ಸರಿಯಾಯಿತು. ಈ ರೀತಿಯ ತ್ಯಾಗವು ಜೀತಪದ್ಧತಿಯನ್ನು ನಿರ್ಮೂಲನಗೊಳಿಸಿತು. ಆತನ ಮೇಲೆ ನಂಬಿಕೆಯಿಟ್ಟಲ್ಲಿ, ನಿಮಗೆ ಆಧಿಭೌತಿಕ ಬದುಕು, ಶಾಂತಿ ದೊರೆಯುವುದು, ನೀವು ದೇವನೊಡಗೆ ಒಂದಾಗುವಿರಿ. ಜನರು ಮರೆತರೂ ಕೂಡ, ಪ್ರಾಪಂಚಿಕ ಸಾವಿನ ಮೂಲಕವೂ ನೀವು ಆತನನ್ನು ಹೊಂದಬಹುದು. ಇಲ್ಲದಿದ್ದಲ್ಲಿ ಇದು ಕೂಡ ಒಂದು ತೊಂದರೆಯಾಗಿ ಗೋಚರಿಸುವುದು. ನಮಗೆ ದೇವರನ್ನು ಸೇರಲು ಬಿಡದ ವಿಚಾರಗಳಿಂದಾಗಿ ನಾವು ಬಳಲುತ್ತೇವೆ, ನೋವು ಪಡುತ್ತೇವೆ. ಸಂಕಟಗೊಳ್ಳುತ್ತೇವೆ. ಇವೆಲ್ಲವೂ ಒಂದು ಕತೆಯ ರೂಪದಂತೆ ಕಾಣಿಸಬಹುದು. ಆದರೆ ಇದರ ಒಟ್ಟು ಉದ್ದೇಶ, ಮಾನವ ಧರ್ಮ, ಭೌತಿಕ ಆಶಯಗಳನ್ನು ಪಡೆಯುವುದು ಅದಕ್ಕಿಂತ ಹೆಚ್ಚಾಗಿ, ಸುಮ್ಮನೆ ಆತನ ಹೆಸರನ್ನು ಕೂಗಿದರೆ ಸಾಕು, ನೀವು ಈ ಬದುಕಿನಿಂದ ಸಂಪೂರ್ಣ ಬಿಡುಗಡೆ ಪಡೆಯುವಿರಿ ಮತ್ತು ಗೌರವಯುತ, ಜೀವನವನ್ನು ದೇವನಿಂದ ಪಡೆದುಕೊಳ್ಳುವಿರಿ.

ಯಹೋವನನು 8:36

36 ಆದುದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ..

ಮತ್ತಾಯನು 11:28-30
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 
ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

The Illusion of Pantheism

 

 

 

Holman QuickSource Guide to Christian Apologetics, copyright 2006 by Doug Powell, ”Reprinted and used by permission.”

ಧಾರ್ಮಿಕ ಶುದ್ಧೀಕರಣ ಮತ್ತು ಪ್ರಾಯಶ್ಚಿತ

Wednesday, December 3rd, 2014

ವಿಶ್ವದ ಯಾವುದೇ ಧರ್ಮವನ್ನು ನೋಡಿದರೂ ಸಹ ಅಲ್ಲಿ, ಸಾಮಾನ್ಯ ಜೀವನಕ್ಕೆ ಹೊಂದಿಕೊಂಡಂತಹ ಶುದ್ಧೀಕರಣ ಕ್ರಿಯೆ ಇರುವುದನ್ನು ನೀವು ಗಮನಿಸಿರಬಹುದು. ಜನನ ಮತ್ತು ಮರಣ, ಹೆಣ್ಣು ಮಗಳು ಮುಟ್ಟಾದಾಗ, ವಾಯು, ನಿದ್ರೆ, ಲೈಂಗಿಕ ಸಂಪರ್ಕ, ಪ್ರಜ್ಞೆ ತಪ್ಪಿದಾಗ, ರಕ್ತ ಸೋರಿದಾಗ, ವಾಂತಿ ಹಾಗೂ ರೋಗ ಇತರೆ ವಿಚಾರಗಳು ಕಾಣಿಸಿಕೊಂಡಾಗ ಶುದ್ಧೀಕರಣ ನಡೆಯುತ್ತದೆ.

ಕೆಲವು ಪ್ರಾಯಶ್ಚಿತ ಕ್ರಮಗಳು ಬಹಾಯಿ ನಂಬಿಕೆಯ ಪ್ರಕಾರ ನಡೆದರೆ, ಉಳಿದವುಗಳು ಅವರ ದೇಹವನ್ನು ನೀರಿನಲ್ಲಿ ಸಂಪೂರ್ಣ ಮುಳುಗು ಹಾಕುವುದನ್ನು ಬಯಸುತ್ತವೆ.

ಯಹೂದಿಗಳು, ಕೈ ತೊಳೆಯುವುದು, ಮಿಕ್ವಾ ಕ್ರಮಗಳು, ಮುಸ್ಲಿಮರು ಗುಸ್ಲ್ ಹಾಗೂ ವುಡು ಮೂಲಕ ಈ ಧಾರ್ಮಿಕ ಕ್ರಿಯೆ ಮಾಡುತ್ತಾರೆ. ಹಿಂದೂಗಳು ಪವಿತ್ರ ನದಿ ಗಂಗೆಯಲ್ಲಿ ಸ್ನಾನ ಮಾಡುವುದರ ಮೂಲಕ, ಆಚಮನ ಹಾಗೂ ಪುಣ್ಯಾಹವಾಹನದ ಮೂಲಕ ಶುದ್ಧೀಕರಣ ಮಾಡುತ್ತಾರೆ. ಶಿಂಟೋಯಿಸ್ಟ್ ಗಳು, ಮಿಸೊಗಿ ಮೂಲಕ ಮತ್ತು ಅಮೇರಿಕಾದ ಮೂಲ ನಿವಾಸಿಗಳು ಸ್ವೀಟ್ ಲಾಡ್ಜ್ ಮೂಲಕ ಶುದ್ಧರಾಗುತ್ತಾರೆ.

ಈ ಎಲ್ಲಾ ಧರ್ಮಗಳ ಪ್ರಾಪಂಚಿಕ ದೃಷ್ಠಿಕೋನ ಬೇರೆಬೇರೆಯಾಗಿವೆ. ಆದರೆ ಇವೆಲ್ಲವುಗಳಲ್ಲಿ ನೀರಿನ ಪ್ರಾಮುಖ್ಯತೆ ಒಂದೇ ರೀತಿಯಾಗಿ ಕಾಣಿಸುತ್ತದೆ. ಒಬ್ಬ ಮನುಷ್ಯ ಪ್ರಜ್ಞಾಪೂರ್ವಕವಾಗಿ ತನ್ನ ಅಶುಚಿತ್ವವನ್ನು ಗುರುತಿಸಿ, ಶುಚಿಯಾಗಲು ಪ್ರಾಯಶ್ಚಿತದ ಮೂಲಕ ಶುದ್ಧೀಕರಣ ಕ್ರಿಯೆಗೆ ಒಳಗಾಗುತ್ತಾನೆ.

ಈ ಸ್ವಅರಿವು, ಕೆಲವು ಧರ್ಮಗಳಲ್ಲಿ ಕಾಣಿಸಿದ್ದು, ಇದು ಮನುಷ್ಯನ ಮನಸ್ಸಿನ ಅರಿವಿನಲ್ಲಿ ಜರಗುವ ವರ್ತನೆಯಾಗಿದ್ದು, ವಿಧಾನದ ಮೂಲಕ ಅಲೌಕಿಕ ಸತ್ಯವನ್ನು ತಿಳಿಯುವುದಾಗಿದೆ. ಹಿರಿಯರು ಹೇಳಿದಂತೆ, ಶುಚಿತ್ವವೇ ದೇವರು. ಅದಾಗ್ಯೂ, ಈ ಭೌತಿಕ ಹಾಗೂ ವಾಸ್ತವಿಕತೆಗಳ ನಡುವೆ ಒಂದು ಬಂಧವಿದ್ದು, ಇದು ಧಾರ್ಮಿಕ ಅಸಮಧಾನ, ಅಸಹಕಾರಗಳನ್ನು ಸರಿದೂಗಿಸುವ ಕಾರ್ಯಮಾಡಿ, ಒಂದು ಶುಚಿತ್ವವನ್ನು ಕಾಪಾಡುವ ಅವಕಾಶವನ್ನು ಬಳಸಬಹುದು. ದೈವಿಕ ಅಂಶಗಳು ಮೂಲಭೂತವಾಗಿ ಅಂತರ್ಭೋದನೆಯಿಂದ ನಡೆಯುವ ನಿರಂತರ ಪ್ರಕ್ರಿಯೆಗಳಾಗಿದ್ದು, ಇಲ್ಲಿ ಶುಚಿತ್ವ, ನಿಲ್ಲದ ಚಕ್ರವಾಗಿ, ಸಂಪೂರ್ಣ ಸ್ವಚ್ಛತೆಯ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ. ಶುಚಿತ್ವ ಹಾಗೂ ಪಾವಿತ್ರ್ಯತೆಯ ಪರಿಕಲ್ಪನೆ ಕುರಿತಾಗಿ ಬರುತ್ತಿರುವ ಅಭಿಪ್ರಾಯಗಳಿಂದ ತಿಳಿಯುವುದೇನೆಂದರೆ, ಅರ್ಹತೆಯ ದಾಸ್ತಾನನ್ನು ರೂಪಿಸುವಲ್ಲಿ ಸೋಲುತ್ತಿವೆ ಎಂದು. ಸ್ವಲ್ಪ ಸಮಯಕಷ್ಟೇ ಜೀವಿಯಾಗಿ ಬದುಕುವ ಅವರು ಅನೈತಿಕತೆಯಿಂದ ತಮ್ಮ ಜೀವನದಲ್ಲಿ ಕುಂದುಕೊರತೆಗಳನ್ನು ಹೆಚ್ಚಿಸಿಕೊಳ್ಳುತ್ತಾ, ಕೊನೆಗೆ ಪ್ರಾಯಶ್ಚಿತಕ್ಕಾಗಿ ಬಂದು ತಮ್ಮ ಪಾಪವನ್ನು ನೀರಿನಲ್ಲಿ ತೊಳೆದು ಹಾಕಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಈ ಶುಚಿತ್ವದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತೊಡೆದು ಹಾಕದಿದ್ದೂ ಸಹ, ಕೆಲವೊಂದು ಆಚರಣೆಗಳೇ ಅಶುಚಿಯಾಗಿರುವ ಕಾರಣ, ಸಮರ್ಥರನ್ನು ರೂಪಿಸಿ, ಈ ಶುಚಿಯನ್ನು ಹೋಗಲಾಡಿಸಬೇಕಿದೆ, ಆ ಮೂಲಕ ಮನುಷ್ಯರ ಹೃದಯದಲ್ಲಿ ಹೊಸ ಶುಚಿತ್ವದ ರೂಪುರೇಷೆಗಳನ್ನು ಬೆಳೆಸಬೇಕು.

ಒಟ್ಟಾರೆ, ಸ್ನಾನ, ಬಟ್ಟೆ ಒಗೆಯುವುದು ವಿಚಾರಗಳು ಬಂದಾಗ, ಅಲ್ಲಿ ನಿಜವಾಗಿಯೂ ನೈರ್ಮಲ್ಯದ ನಿಜವಾದ ಪ್ರಾಯೋಗಿಕ ಪ್ರಯೋಜನಗಳಿವೆ. ಆದರೆ, ಒಬ್ಬ ವ್ಯಕ್ತಿಯ ಆಂತರ್ಯ ಹಾಗೂ ಬಾಹ್ಯಗಳ ನಡುವಿನ ಒಟ್ಟುಗೂಡುವಿಕೆ, ದಿನಂಪ್ರತಿ ನಡವಳಿಕೆಗಳಾದ ಅವೈಜ್ಞಾನಿಕ ಚರ್ಮ ಚಿಕಿತ್ಸೆಗಳು ಧಾರ್ಮಿಕತೆಯ ದೃಷ್ಠಿಯಲ್ಲಿ ಪ್ರಾಮಾಣಿಕವಾಗಿ ಗೋಚರಿಸಿದರೂ ಸಹ, ಆತನ ದೇಹದ ಒಳಭಾಗದಲ್ಲಿ ಅಂತರಾತ್ಮಕ್ಕೆ ವಿರುದ್ಧವಾಗಿ, ಆತನ ಆಧ್ಯಾತ್ಮಿಕ ಕಲ್ಯಾಣವನ್ನು ಪ್ರಶ್ನಿಸುತ್ತವೆ.

ರಬ್ಬಿ ಯೆಶ್ವಾ ಇಂತಹ ಆಚರಣೆಗಳ ಕುರಿತು ತನ್ನ ಯಹೂದಿ ಅನುಯಾಯಿಗಳಿಗೆ ಈ ರೀತಿ ಹೇಳುತ್ತಾರೆ

ಮತ್ತಾಯನು 15:1-2,11, 17-20
15 ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು ಹೇಳಿದನು, 2 “ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು.”

11 ಬಾಯೊಳಗೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಆದರೆ ಬಾಯೊ ಳಗಿಂದ ಹೊರಗೆ ಬರುವಂಥದೇ ಮನುಷ್ಯನನ್ನು ಹೊಲೆಮಾಡುತ್ತದೆ.”

17 ಬಾಯೊಳಗೆ ಹೋಗಿ ಹೊಟ್ಟೆ ಯಲ್ಲಿ ಸೇರುವದೆಲ್ಲವೂ ಬಹಿರ್ಭೂಮಿಗೆ ಹೋಗುವ ದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
18 ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವುಗಳು ಹೃದಯದೊಳಗಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ.. 19 ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ. 20 ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು.”

ಮಾನವನ ಕೊಳೆಯ ಜೊತೆಯಲ್ಲಿಯೇ, ಇತರೆ ಕೆಲವು ವಿಚಾರಗಳನ್ನು ತುಂಬಾ ಗಂಭೀರ ರೀತಿಯಲ್ಲಿ ಅರಿತು, ಅವುಗಳ ನೈತಿಕ ಅಧಃಪತನವನ್ನು ತಿಳಿಯುವ, ಅದರ ಒಳಾರ್ಥವನ್ನು ಬಗೆದು ಅಂತಹ ಅಶುಚಿತ್ವವನ್ನು ತೊಡೆದುಹಾಕಬೇಕು. ಶೇಕ್ಸ್ಪಿಯರ್ ಲೇಡಿ ಮ್ಯಾಕ್ಬೆತ್ ನಾಟಕದಲ್ಲಿ ಆಕೆ, ರಾಜ ಡಂಕನ್ ಕೊಲೆಯಲ್ಲಿ ತನ್ನ ಪಾತ್ರವನ್ನು ವಿಶ್ಲೇಷಿಸಿ ಆ ಪಾಪವನ್ನು ತೊಳೆಯುವಾಗ, ತನ್ನ ಕೈಯಲ್ಲಿನ ರಕ್ತದ ಕಲೆಗಳನ್ನು ನೋಡುತ್ತಾ “ಹೋಗು, ಕಳಂಕಿತ ಕಲೆಯೇ” ಎನ್ನುತ್ತಾಳೆ.

ಈ ಧಾರ್ಮಿಕ ಕ್ರಿಯೆಗಳನ್ನು ಮಾಡುವುದರಿಂದ ಸ್ವಲ್ಪ ಮಟ್ಟಿಗೆ, ತಾವು ಮಾಡಿದ ತಪ್ಪನ್ನು ಅರ್ಥೈಸಿಕೊಂಡು, ಅದರ ಕುರಿತಾಗಿ ತಮ್ಮ ಮುಗ್ಧತೆಯನ್ನು ಪ್ರಶ್ನಿಸಿ, ತಪ್ಪನ್ನು ಒಪ್ಪಿಕೊಂಡು, ಮಾನವ ಸಹಜ ಗುಣವಾಗಿ ಪ್ರಾಯಶ್ಚಿತದ ಮಾರ್ಗವಾಗಿ, ತಮ್ಮನ್ನು ಶುಚಿಯಾಗಿಸಿ, ತಮ್ಮ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಅವರ ಜಾಗೃತಿ, ಧರ್ಮನಿಷ್ಠ, ಉತ್ಸಾಹ ಹಾಗೂ ಬಯಕೆಗಳನ್ನು ಹೆಚ್ಚಾಗಿಸಿವೆ, ಆದರೆ ಅದೇ ತಪ್ಪನ್ನು ಇನ್ನೊಮ್ಮೆ ಮಾಡಬಾರದು ಎನ್ನುವ ನಿರ್ದೇಶನ ನೀಡುವಲ್ಲಿ ಇದು ವಿಫಲವಾಗುತ್ತಿದೆ. ಮಾನವನ ಸೀಮಿತ ಹಾಗೂ ಅವಲಂಬಿತ ಸಾಮರ್ಥ್ಯಗಳನ್ನು ಅರ್ಥೈಸಿಕೊಂಡು ಆತನಿಗೆ ಸಾವಧಾನಚಿತ್ತದಿಮದ ಈ ವಿಚಾರಗಳನ್ನು ತಿಳಿಸಬೇಕಾಗುತ್ತದೆ. ಇವೆಲ್ಲವೂ ಸಾಧ್ಯವಾದರೂ ಸಹ, ಯಾವಾಗ ಆತನಿಗೆ ಶುಚಿತ್ವದ ಮಹತ್ವವನ್ನು ತಿಳಿಸುವುದು. ಇಂತಹ ಧಾರ್ಮಿಕ ಮೂಢನಂಬಿಕೆಗಳಿಂದ ಕೂಡಿದ ಪ್ರಾಯಶ್ಚಿತ ಕ್ರಿಯೆಗಳನ್ನು ನಿಲ್ಲಿಸಿದಾಗ ಮಾತ್ರ,ಅವನ ಪೂರ್ವಾಪರಗಳ ಆಧರಿತ ಶಕ್ತಿ, ಆತ್ಮಗಳು ಆತನ ಸಾವಿನೊಂದಿಗೆ ಶಾಂತಿ ಪಡಯುತ್ತವೆ.

ಅಂತಿಮವಾಗಿ, ದೇವರ ನಿಜವಾದ ಪ್ರಾತಿನಿಧ್ಯವನ್ನು, ಸರಿತಪ್ಪುಗಳ ನಿರ್ಧಾರಗಳು, ಭವಿಷ್ಯದ ತೀರ್ಪುಗಳು ಮೂಲಕ ನಾವೆಲ್ಲರೂ ಹಾಳುಮಾಡಿದ್ದೇವೆ ಎಂಬ ಅಂಶ ಹೆಚ್ಚಿನ ಎಲ್ಲಾ ಮಾನವರ ಮನಸ್ಸಿನಲ್ಲಿದೆ.

ರೋಮಾಪುರದವರಿಗೆ 2:14-16
14 ನ್ಯಾಯಪ್ರಮಾಣವಿಲ್ಲದ ಅನ್ಯಜನರು ನ್ಯಾಯಪ್ರಮಾಣದಲ್ಲಿರುವವುಗಳನ್ನು ಸ್ವಾಭಾವಿಕವಾಗಿ ಕೈಕೊಳ್ಳುವಾಗ ನ್ಯಾಯಪ್ರಮಾಣವಿಲ್ಲದ ಇವರು ತಮಗೆ ತಾವೇ ನ್ಯಾಯಪ್ರಮಾಣವಾಗಿದ್ದಾರೆ. 15 ಅವರ ಮನಸ್ಸಾಕ್ಷಿಯು ಸಹ ಸಾಕ್ಷಿಕೊಟ್ಟು ಅವರ ಯೋಚನೆಗಳು ಒಂದಕ್ಕೊಂದು ತಪ್ಪುಹೊರಿಸುತ್ತಾ ಇಲ್ಲವೆ ಪ್ರತಿವಾದ ಮಾಡುತ್ತಾ ಇರುವದರಿಂದ ಅವರು ತಮ್ಮ ಹೃದಯ ಗಳಲ್ಲಿ ಬರೆದಿರುವ ನ್ಯಾಯಪ್ರಮಾಣದ ಕ್ರಿಯೆಗಳನ್ನು ತೋರಿಸುತ್ತಾರೆ 16 ಮನುಷ್ಯರ ರಹಸ್ಯಗಳ ವಿಷಯ ವಾಗಿ ನನ್ನ ಸುವಾರ್ತೆಗನುಸಾರ ಯೇಸು ಕ್ರಿಸ್ತನ ಮುಖಾಂತರ ದೇವರು ನ್ಯಾಯತೀರಿಸುವ ದಿವಸದಲ್ಲಿ ಅವರು ತೀರ್ಪು ಹೊಂದುವರು.

ಮನುಕುಲ ಈ ಒತ್ತಡವನ್ನು ನಿಭಾಯಿಸಲು ಹೋರಾಡಿತ್ತು. ಸಿದ್ಧಾಂತಗಳ ಭ್ರಮೆಯ ಧಾರ್ಮಿಕ ಸಂಭಾಷಣೆಯನ್ನು ರೂಪಿಸುವ ಮೂಲಕ, ಶುಚಿತ್ವದ ಹಾದಿಯಲ್ಲಿ ಹೊಸ ಭರವಸೆಯ ಬೆಳಕನ್ನು ಹುಡುಕುವ ಪ್ರಯತ್ನ ಸಾಗಿದೆ. ನಡುವೆ, ವಿರೋಧಿಸುವ, ಆಸ್ತಿಕ ಭಾವದ ಮನೋವಿಕೃತರು ಇದನ್ನು ಸ್ವಂತ ಸಂಗತಿಯನ್ನಾಗಿಸಿ, ಹೊರಬರಲು ಒಪ್ಪುತ್ತಿಲ್ಲ. ಅವರ ನಂಬಿಕೆಯ ಪ್ರಕಾರ, ಧರ್ಮವೇ ಪ್ರಧಾನವಾಗಿದ್ದು, ದುರ್ಬಲ ಮನಸ್ಸಿನ ವ್ಯಕ್ತಿಗಳು, ಫ್ರಾಯ್ಡ್ ನರವ್ಯಾಧಿಗೆ ತುತ್ತಾಗಿ ಇದನ್ನು ನಂಬುವಂತಹ ಪರಿಸ್ಥಿತಿಯಲ್ಲಿರುತ್ತಾರೆ. ಆಸಕ್ತಿದಾಯಕ ವಿಷಯವೇನೆಂದರೆ, ಮನುಕುಲ ಈ ವಿಚಾರದ ಕುರಿತು ತಮ್ಮದೇ ಆದ ಪ್ರಾಯಶ್ಚಿತಗಳನ್ನು ಕಂಡುಕೊಂಡಿದ್ದು, ಸೃಷ್ಟಿಕರ್ತನಿಗೆ ವಿನಯಪೂರ್ಣ ಮನವಿ ಸಲ್ಲಿಸುವುದನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.

ಈ ಜಂಜಾಟಗಳಿಗೆ ಪ್ರತಿಕ್ರಿಯೆಯ ರೂಪವಾಗಿ, ವ್ಯಕ್ತಿಗೆ ಅನುಗುಣವಾಗಿ ಪರಿಹಾರವನ್ನು ಒದಗಿಸುವ ಕ್ರಮವನ್ನು ಸೂಚಿಸಲು ಇಚ್ಛಿಸುತ್ತೇನೆ. ಯೇಸುಕ್ರಿಸ್ತನ ಹೊತ್ತಿಗೆಗಳು, ಇತರೆ ಮನುಕುಲದಲ್ಲಿರುವ ಹಾಗೆ ದೇವನನ್ನು ಹುಡುಕುವ, ಭಿನ್ನವಿಸಿಕೊಳ್ಳುವ ಹಾಗೂ ತಲುಪುವ ಮಾರ್ಗವಲ್ಲ, ಬದಲಾಗಿ ಮಾನವೀಯತೆ, ನಂಬಿಕೆಗಳ ಆಧಾರದಲ್ಲಿ ದೇವನೇ ಮನಷ್ಯರನ್ನು ಪಡೆಯುವುದಾಗಿದೆ. ಇದು ಬಲ, ದುರ್ಬಲ, ವ್ಯಕ್ತಿಯೊಬ್ಬರ ಸಾಮರ್ಥ್ಯವನ್ನು ಆಧರಿಸಿ ಅಲ್ಲ, ಬದಲಾಗಿ, ಶುಚಿತ್ವ ಹಾಗೂ ಶುದ್ಧತೆಗಳು ದೇವನಿಂದ ಉಡುಗೊರೆಯಾಗಿ ಪಡೆಯಬಹುದು. ಅದಕ್ಕಾಗಿ ನೀವು ಆತನ ಅನುಯಾಯಿಯಾಗಿ, ಆತನನ್ನು ಅನುಸರಿಸಿದರೆ ಸಾಕು.

ತೀತನಿಗೆ 3:5
5 ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು.

ರೋಮಾಪುರದವರಿಗೆ 6:23
23 ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.

ಎಸ್ಪಿಯನ್ಸ್ 2:8-9
8 ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ, 9 ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ..

1 ಯೋಹಾನನು 1:7
7 ಆತನು ಬೆಳಕಿನಲ್ಲಿರು ವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ; ಆತನ ಮಗನಾದ ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ.

1 ಯೋಹಾನನು 1:9
9 ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು..

ವಾಟರ್ ಬ್ಯಾಪ್ಟಿಸಂ ಅಂತಹ ಪ್ರಾಯಶ್ಚಿತ ಕ್ರಮಗಳನ್ನು ಉದಾಹರಿಸಿ, ಕ್ರೈಸ್ತ ಧರ್ಮ ಕೂಡ ಉಳಿದ ಯಾವುದೇ ಧರ್ಮಗಳಿಗಿಂತ ಭಿನ್ನವಲ್ಲ ಎಂದು ನೀವು ಪ್ರಶ್ನಿಸಬಹುದು. ಮೊದಲನೆಯದಾಗಿ ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಈ ರೀತಿ ಸ್ನಾನದ ಮೂಲಕ ಪ್ರಾಯಶ್ಚಿತ ಪಡೆಯುವವರು, ಚರ್ಚಿನ ಅನುಯಾಯಿಗಳೆಂದು ಕರೆಯಿಸಿಕೊಳ್ಳುವ ಹುಸಿಭಕ್ತರು. ಬ್ಯಾಪ್ಟಿಸಂನ ನಿಜಾರ್ಥವೇನೆಂದರೆ, ಇದು ನಂಬಿಕೆಯ ಕೇಂದ್ರ, ಪ್ರಾಥಮಿಕವಾಗಿ ಇದು ಶುಚಿತ್ವದ ಅದ್ಭುತ ಚಿಹ್ನೆಯಾಗಿ ಗೋಚರಿಸುತ್ತದೆ. ಇದು ಸರಿಯಾದ ರೀತಿಯಲ್ಲಿ ಯೇಸುಕ್ರಿಸ್ತನ ದೇಹದ ರಕ್ತದ ಕಣಗಳಂತೆ, ತನ್ನನ್ನು ನಂಬಿದವರನ್ನು ಪರಿಶುದ್ಧರನ್ನಾಗಿಸುತ್ತದೆ. ನ್ಯಾಯಯುತವಾಗಿ ಪರಿಶುದ್ಧತೆಯ ಮೂಲಕ ಅವರನ್ನು ಬದಲಾಯಿಸಿ, ಹೊಸ ಜೀವನಪಥವನ್ನು ನೀಡುತ್ತದೆ. ಈ ವಾಟರ್ ಬ್ಯಾಪ್ಟಿಸಂ ನೈಜತೆಗೆ ಸಾಕ್ಷಿಯಾಗಿದ್ದು, ಇದು ಜಲಜನಕ ಹಾಗೂ ಆಮ್ಲಜನಕಗಳ ಸಂಯೋಜನೆಗಳ ಸ್ವರೂಪವಲ್ಲ. ಇದು ಯೇಸುಕ್ರಿಸ್ತನ, ಜೀವನ ಕ್ರಮದ ಪರಿಪಾಠವಾಗಿದ್ದು, ಈ ಪವಿತ್ರತೆ, ಜೀವಂತ ನೀರಿನಿಂದ, ಒಬ್ಬ ವ್ಯಕ್ತಿಯ ಕೊಳೆಯನ್ನು ದೂರವಾಗಿಸಿ, ಆತನ ಹೃದಯ ಹಾಗೂ ಜೀವನವನ್ನು ಪರಿವರ್ತಿಸುತ್ತದೆ. ದೇವನು ತಾನಾಗಿಯೇ ನಿಮಗೆ ಬಿಡುಗಡೆಯ ಉಡುಗೊರೆಯನ್ನು ನೀಡುತ್ತಾನೆ. ಮತ್ತು ಈ ಪವಿತ್ರ ಶಕ್ತಿಯನ್ನು ಮನುಷ್ಯ ಶುದ್ಧಿಕರಿಂದ ನೀಡಲು ಸಾಧ್ಯವಿಲ್ಲ. ಆದ್ದರಿಂದ, ವಾಟರ್ ಬ್ಯಾಪ್ಟಿಸಂ ದೇವನ ಶಕ್ತಿಯಾಗಿದ್ದು, ಸ್ವರ್ಗದ ಇರುವಿಕೆಯಿಂದ ಕೂಡಿದೆ. ಈ ಗರ್ಭದ ಕಾಲಚಕ್ರದಲ್ಲಿ ಇದು ವ್ಯಕ್ತಿಯೊಬ್ಬನಿಗೆ ಹೊಸಹುಟ್ಟು ನೀಡುವುದಾಗಿದೆ. ಧಾರ್ಮಿಕ ಚಟುವಟಿಕೆಗಳನ್ನು ಮಾಡಲು ಮಾನವನಾಗಿ ಹುಟ್ಟು ಪಡೆಯುವುದಲ್ಲ, ಬದಲಾಗಿ, ದೇವರಿಂದ ಸೃಷ್ಟಿಸಲ್ಪಟ್ಟ, ಪವಿತ್ರ ಶಕ್ತಿಯಾದ ಯೇಸುಕ್ರಿಸ್ತನಿಂದ ಮರುಹುಟ್ಟು ಪಡೆಯುವ ಪ್ರಕ್ರಿಯೆ. ಈ ಹೊಸಹುಟ್ಟನ್ನು ಹಿಂದೂ ಅಥವಾ ಬೌದ್ಧ ಧರ್ಮದ ಮರುಹುಟ್ಟು ಅಥವಾ ಪುನರ್ಜನ್ಮದೊಂದಿಗೆ ತುಲನೆ ಮಾಡಬೇಕಿಲ್ಲ. ಇದು ಪವಿತ್ರ ಶಕ್ತಿಯಿಂದ ಸಂಯೋಜಿತವಾಗಿ ಯೇಸುಕ್ರಿಸ್ತನಿಂದಲೇ, ನಡೆಯುವ ಕೆಲಸವಾಗಿದೆ. ಆತನ ಕೆಲಸಗಳನ್ನು ಬಿಡುಗಡೆಯ ಮಾರ್ಗವಾಗಿ, ನಂಬಿಕೆ ಹಾಗೂ ಸಮರ್ಪಿತ ಭಾವದಿಂದ ನೋಡಬೇಕು.

ಹೆಬ್ರಾಯಿಕ್ ಪ್ರವಾದಿ ಯೆಹೆಜ್ಯೇಲನು 36:25-27 ಪ್ರಕಾರ ಇಸ್ರೇಲ್‌ನ ಭವಿಷ್ಯ ಪಾಪವಿಮೋಚನೆಯ ಆಧಾರದಲ್ಲಿ ಪವಿತ್ರಗ್ರಂಥವು ಈ ವಾಸ್ತವವನ್ನು ಹೋಲಿಸುತ್ತದೆ.

25 ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. 26 And ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ. 27 ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.

ಟೇಬರ್‌ನೇಕಲ್ಸ್ ಫೀಸ್ಟ್ ಅಥವಾ ಸಕ್ಕಟ ಇನ್ ವೇಳೆ ರಬ್ಬಿ ಯಶುವ ಈ ರೀತಿಯಾಗಿ ಹೇಳಿದ್ದರು.

ಯೋಹಾನನು 7:37-39
37 ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು–ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು.’” 39 ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.

ಪ್ರಾಚೀನ ಕಾಲದಲ್ಲಿ ಯಹೂದಿಗಳು ತಮ್ಮ ದೇವರಿಗೆ ಅತ್ಯುತ್ತಮ ಸಾಂಪ್ರದಾಯಿಕ ಕರ್ತವ್ಯಗಳನ್ನು ಮಾಡುವುದ್ ಮೂಲಕ ಅಲ್ಪಕಾಲಿಕ ತೃಪ್ತಿ ಹೊಂದುತ್ತಿದ್ದರು. ಆದರೆ ಹೀಬ್ರು 10 ಉಲ್ಲೇಖಿಸಿರುವಂತೆ, ಇವು ಕೇವಲ ಚಿಹ್ನೆಗಳಾಗಿತ್ತೆ ವಿನಃ ನಿಜವಾದ ಪ್ರಕ್ರಿಯೆ ಆಗಿರಲಿಲ್ಲ. ನಮ್ಮ ಕೊಳಯೆನ್ನು ತೊಳೆಯಲು ಕ್ರಿಸ್ತನಿಗೆ ಒಮ್ಮೆ ಅರ್ಪಣೆ ಸಲ್ಲಿಸಲಾಯಿತು ಮತ್ತು ಜಗತ್ತಿನ ಪಾಪವನ್ನು ತೊಳಯುವ ಕರ್ತನಿಗೆ ಸಾರ್ವಕಾಲಿಕ ತ್ಯಾಗದ ಪ್ರತೀಕವಾಗಿ ‘ದೇವರ ಕುರಿಮರಿ’ಯನ್ನು ಅರ್ಪಿಸಲಾಗುವುದು. ಯಹೂದಿಗಳು ಇಂದು ತಮ್ಮನ್ನು ತ್ಯಾಗ ಮಾಡಬೇಕಿಲ್ಲ ಬದಲಾಗಿ ಪ್ರಾರ್ಥನೆಯ ವಿಧಾನಗಳು, ಉಪವಾಸ, ಒಳ್ಳೆಯ ನಡತೆಗಳು ಸಾಕಾಗುವುದು. ಟೋರಾಗೆ ಸಂಬಂಧಿಸಿದ ಬರವಣಿಗೆಯ ಪದಗಳನ್ನು ವಿರೋಧಿಸಿ ದಂಗೆಯೇಳುವುದು ಸಮಾಧಾನಕರವೇ?

ಲೆವಿಡಿಕಸ್ 17:11
11 ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ.

ನೀವು ಎಷ್ಟು ಮಿಟ್ಸೋವ್ಟ್ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವು ಸಾಕಾಗುವಷ್ಟು ಮಾಡಿದ್ದೀರಿ ಎಂಬುದಕ್ಕೆ ಏನು ಪುರಾವೆಯಿದೆ? ತಾತ್ಕಾಲಿಕ ತ್ಯಾಗಕ್ಕಿಂತ ಮಿಗಿಲಾಗಿ ಮೆಸಯ್ಯದ ಮೂಲಕ ದೇವರ ದಯೆ ಮತ್ತು ಕರುಣೆಗಳ ಮಹಾತ್ಯಾಗದ ಮುಂದೆ ನಿಮ್ಮ ಪಾಪಗಳು ಮರೆತುಹೋಗಿವೆಯೇ?ಮೆಸಯ್ಯ ಇನ್ ಇಸಯ್ಯ 53.?

ಅದೇ ರೀತಿ ಯೇಸುಕ್ರಿಸ್ತನ ಮರಣವನ್ನು ಒಪ್ಪಿಕೊಳ್ಳದ ನನ್ನ ಮುಸ್ಲಿಂ ಸ್ನೇಹಿತರು, ಅದನ್ನು ಪ್ರವಾದಿಗಳ ಕಚೇರಿಯ ವಿಫಲತೆಗೆ ಹೋಲಿಸಿ, ಇಡೀ ವಿಚಾರದಲ್ಲಿ ಮೆಸಯ್ಯದ ಮುಖೇನ ಅಬ್ರಾಹಮಿಕ್ ವಿಧಾನದ ಪರ್ಯಾಯ ಸಮನ್ವಯವನ್ನು ನೀಡುವ ದೇವನ ಮಹತ್ತರ ಚಿಂತನೆಯ ವಿಚಾರವನ್ನು ಎಲ್ಲರೂ ಮರೆತಿದ್ದಾರೆ. ಆತನ ತಾತ್ಕಾಲಿಕ ನಾಚಿಕೆ, ಅವಮಾನಗಳನ್ನು ಸಹಿಸಿಕೊಂಡು ಇಂದಿನ ಸಂತಸ, ಸಂಭ್ರಮಗಳಿಗೆ ಕ್ರಾಸ್ ದ್ಯೋತಕವಾಗಿ ಮಹೋನ್ನತ ವೈಭೋಗದಲ್ಲಿ ಮುಂದುವರಿಯುತ್ತಿದೆ. ಹೀಬ್ರು 2:9-18; 12:2.

jesusandjews.com/wordpress/2011/07/14/crucifixion-of-jesus-christ-and-islam/

ಯೇಸುಕ್ರಿಸ್ತ ಜೀವನದ ನೀರನ್ನು ನೀಡಬಲ್ಲ, ಅದು ನಿಮ್ಮನ್ನು ಪರಿಪೂರ್ಣವಾಗಿ ಸಮಾಧಾನ ಪಡಿಸಿ, ಆತ್ಮವನ್ನು ಪರಿಶುದ್ಧಗೊಳಿಸುವುದು ಮತ್ತು ಆತ ಸ್ವರ್ಗದ ಪಿತಾಮಹನಾಗಿದ್ದರೂ ಕೂಡ ನಿಮಗೆ ಆತ ಮಾರ್ಗದರ್ಶನ ನೀಡುತ್ತಾನೆ. ಕೊನೆಯದಾಗಿ ನಾನು ಹೇಳಲು ಇಚ್ಛಿಸುವುದೇನೆಂದರೆ, ಸಮರಿಟನ್ ಮಹಿಳೆಯಂತೆ, ನಿಮ್ಮ ಆಧ್ಯಾತ್ಮಿಕ ದಾಹವನ್ನು ತಣಿಸಲು ಈ ಜೀವನದ ನೀರನ್ನು ಕೇಳಬೇಕು. ನಿಮ್ಮನ್ನು ಮೋಸಗೊಳಿಸುವ ಹಾಗೂ ದಾಹದಿಂದಲೇ ಬದುಕುವಂತೆ ನಿರ್ದೇಶಿಸುವ ಸುಳ್ಳು ಧರ್ಮಗಳ, ಭಕ್ತಿ ಮತ್ತು ತತ್ವಗಳನ್ನು ಮೀರಿ ನೀವು ಈ ಜೀವನ ಚೈತನ್ಯವನ್ನು ಪಡೆಯಬೇಕು.

ಯೋಹಾನನು 4:10, 13-14
10 ಯೇಸು ಪ್ರತ್ಯುತ್ತರವಾಗಿ ಆಕೆಗೆ–ದೇವರ ದಾನವೇನೆಂಬದೂ ಮತ್ತು–ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು” 13 ಯೇಸು ಪ್ರತ್ಯುತ್ತರವಾಗಿ ಆಕೆಗೆ–ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೆ ತಿರಿಗಿ ನೀರಡಿಕೆಯಾಗುವದು 14 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.”

ಕೊನೆಯದಾಗಿ ಏಸುವು ನಿಮ್ಮನ್ನು ಆಮಂತ್ರಿಸುತ್ತಾರೆ!

ಮತ್ತಾಯನು 11:28-30
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು 29  ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.”

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

Ritual cleansing and purification

ಹಿಂದೂ ಧರ್ಮದ ಪವಾಡಗಳು

Wednesday, December 3rd, 2014

ಹಲವಾರು ಹಿಂದೂಗಳು ತಮ್ಮ ನಂಬಿಕೆಯ ಕುರಿತಾಗಿ ತುಂಬಾ ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು ನಾನು ತಿಳಿದಿದ್ದೇನೆ. ಆದರೆ, ತಮ್ಮ ಧರ್ಮ ಹೇಳುವುದು ಮಾತ್ರ ಸತ್ಯ ಎಂದು ವಾದಿಸುವುದು ಮಾತ್ರ ಗಂಭೀರವಾಗಿ ತಪ್ಪು.

ಇದಕ್ಕೆ ಒಂದು ಉದಾಹರಣೆಯೆಂದರೆ, 1995ರಲ್ಲಿ ದೇವರು ಹಾಲು ಕುಡಿಯುವ ಘಟನೆ. ಒಬ್ಬ ಧಾರ್ಮಿಕ ಅನುಯಾಯಿಯ ಕನಸಿಲ್ಲಿ ಗಣೇಶನ ಮೂರ್ತಿ, ಹಾಲು ಕುಡಿಯುವ ವಿಚಾರ ದೇಶದೆಲ್ಲೆಡೆ, ವಿಶ್ವದೆಲ್ಲೆಡೆ ವಿವಿಧ ದೇವಾಲಯಗಳಲ್ಲಿ ಗಣೇಶನಿಗೆ ಹಾಲು ನೀಡುವ ರೋಗವಾಗಿ ಮಾರ್ಪಟ್ಟಿತ್ತು. ಎಲ್ಲಡೆ ಒಂದೇ ರೀತಿಯ ಪವಾಡ ನಡೆದಿತ್ತು.

ಆದರೆ, ಇದು ಪವಾಡವಾಗಿರದೆ, ದೃಢ ದಾಖಲೆಗಳ ಆಧಾರದಲ್ಲಿ, ಭೌತಶಾಸ್ತ್ರಕ್ಕನುಗುಣವಾಗಿ, ಕ್ಯಾಪಿಲ್ಲರಿ ಕ್ರಿಯೆ ವಿಧಾನದ ಮೂಲಕ ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ವಿಗ್ರಹ ಹಾಲು ಕುಡಿದಂತೆ ಭಾಸವಾಗುತ್ತದೆ.

ಈ ವಿಷಯವನ್ನು ದೂರದರ್ಶನ ಕಾರ್ಯಕ್ರಮಗಳಲ್ಲಿ ನೋಡಿದ ನೆನಪು ನನಗಿದೆ. ಅದರಲ್ಲಿ ವಿವಿಧ ಧರ್ಮಗಳ ಪವಾಡಗಳ ಕುರಿತು ಚರ್ಚೆಗಳು ನಡೆದವು. ಕೆಲವು ಭಾರತೀಯರ ತಂಡ ಮಿಕ್ಕಿಮೌಸ್ ಪ್ರತಿಮೆಯನ್ನು ತಯಾರಿಸಿ, ಅದರ ಮುಂದೆ ಹಾಲನ್ನು ಇಟ್ಟಾ ಅದು ಕೂಡ ಸೇವಿಸಿತು. ಆಗ ಹಿಂದೂವಾದಿಗಳ ಮುಖದಲ್ಲಿನ ನಿರಾಸೆಯನ್ನು ನಾನು ಗಮನಿಸಿದೆ. ಆಗ ತಿಳಿಯಿತು ಹಾಲು ಕುಡಿಯುವುದು ಸುಳ್ಳು ಅಂತ.
ಏನಾಗಿದೆ ಎಂದು ವೈಜ್ಞಾನಿಕವಾಗಿ ತಿಳಿಯದೆ, ನಡೆದ ಮುಗ್ಧ ಘಟನೆ ಎಂದು ಇದನ್ನು ಹೇಳಬಹುದು. ಆದರೆ ನಾನು ಯೋಚಿಸುವುದೇನೆಂದರೆ, ಕೆಲವು ಧರ್ಮಗಳು, ಆಧ್ಯಾತ್ಮಿಕ ಹಕ್ಕನ್ನು ಪಡೆದಿವೆ ಎನ್ನುವ ದರ್ಪ ತೋರಿಸುತ್ತಾ, ತಮ್ಮ ಧರ್ಮದಲ್ಲಿ ಮಾತ್ರ ಪವಾಡಗಳು ಸಾಧ್ಯ ಎಂಬ ಮನಸ್ಥಿತಿಯನ್ನು ಹೊಂದಿರುವ ಎಲ್ಲರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ. ಯಾವುದೇ ಶಕ್ತಿಯನ್ನು ದೇವರ ಪ್ರಭಾವವೇ ಎಂದು ತಿಳಿಯಲು, ಪರೀಕ್ಷಿಸಬೇಕು ಎಂದು ಬೈಬಲ್ ಹೇಳುತ್ತದೆ. ಹಾಗಾಗಿ ಧಾರ್ಮಿಕ ಅನುಭವವನ್ನು ಸ್ವೀಕರಿಸದೆ, ದೇವರ ಪ್ರತಿನಿಧಿ ಅಥವಾ ದೇವರ ಪರವಾಗಿ ಮಾತನಾಡುವ ಜನರು ಅಥವಾ ಪ್ರಸಂಗಗಳನ್ನು ನಾವು ಸತ್ಯಶೋಧನೆಯ ಮೂಲಕ ಪರೀಕ್ಷಿಸಬೇಕಿದೆ.
ಒಟ್ಟಿನಲ್ಲಿ ನಾನು ಹಿಂದೂ ಧರ್ಮದ ಕುರಿತು ತುಂಬಾ ಬರೆದುಬಿಟ್ಟೆ. ನನ್ನ ವಿವಿಧ ಲೇಖನಗಳು, ಧರ್ಮದ ಗುಣಲಕ್ಷಣಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುತ್ತವೆ ಎಂಬ ಭರವಸೆಯಿದೆ.

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

Miracles in Hinduism

ಹಿಂದೂ ಧರ್ಮ ಮತ್ತು ಪುನರ್ಜನ್ಮ

Wednesday, December 3rd, 2014

ಹೆಚ್ಚಿನ ಪೂರ್ವಾತ್ಯ ಧರ್ಮಗಳ ಪ್ರಕಾರ ಪುನರ್ಜನ್ಮ ಎನ್ನುವುದು, ಸಾವಿನ ನಂತರ ಜೀವನ ಕರ್ಮಗಳನ್ನು ಅನುಭವಿಸುವ ಒಂದು ದಾರಿಯಾಗಿದೆ. ಹಿಂದೂಗಳು ಜೀವನವನ್ನು ಹುಟ್ಟು, ಸಾವು, ಮರುಹುಟ್ಟು ಅಂದರೆ ಸಂಸಾರದ ಚಕ್ರ ಎಂದು ನೋಡುತ್ತಾರೆ. ಸಂಸಾರ ಎಂಬುದು ಪೂರ್ವಜನ್ಮದ ಕರ್ಮವಾಗಿದ್ದು, ಇಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಸರಿ-ತಪ್ಪುಗಳಿಗೆ ಅನ್ವಯಿಸುವಂತೆ ಸರಿಯಾಗಿ ಫಲಿತಾಂಶವನ್ನು ಅನುಭವಿಸಬೇಕು. ಇದರ ಮೂಲಕ ವ್ಯಕ್ತಿಯೊಬ್ಬ ಕರ್ಮಗಳನ್ನು ಅನುಭವಿಸಿ ಮೋಕ್ಷ ಅಥವಾ ಮುಕ್ತಿಯನ್ನು ಪಡೆಯುತ್ತಾನೆ. ಹೀಗೆ ಸಂಸಾರದ ಜಂಜಾಟದಿಂದ ಮುಕ್ತನಾಗುತ್ತಾನೆ. ಹಾಗಾಗಿ ಪ್ರತಿ ಹಿಂದೂವಿನ ಅಂತಿಮ ಆಸೆ, ಸಂಸಾರದ ಚಕ್ರದಿಂದ, ಕರ್ಮಗಳನ್ನು ಅನುಭವಿಸಿ ಮುಕ್ತಿಯನ್ನು ಪಡೆಯುವುದಾಗಿದೆ. ಈ ಶುದ್ಧತ್ವವನ್ನು ಪಡೆಯಲು ಆತ ಏನೇ ಆದರೂ ಅನುಭವಿಸುತ್ತಾನೆ. ಈ ಮುಕ್ತಿಯನ್ನು ಪಡೆಯುವ ಹಲವಾರು ದಾರಿಗಳಿವೆ. ಯೋಗ ಮಾಡುವುದು, ಜ್ಞಾನ, ಭಕ್ತಿ ಹಾಗೂ ಕೆಲಸಗಳ ಮೂಲಕ ಭೌತಿಕ ಲೋಕದಿಂದ ಆತ್ಮವನ್ನು ಬಿಡುಗಡೆಗೊಳಿಸುವುದಾಗಿದೆ.

ಅದಾಗ್ಯೂ, ಈ ನಂಬಿಕೆಯ ವ್ಯವಸ್ಥೆ ರುಜುವಾತಾಗಿಲ್ಲ, ಆದರೂ ಧಾರ್ಮಿಕ ನಂಬಿಕೆಗಳ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ನಂಬುವವರು ಇದನ್ನು ಸ್ವೀಕರಿಸಿದ್ದಾರೆ ಮತ್ತು ಮುಜುಗರವಾಗುವ ರೀತಿಯಲ್ಲಿ ಪಾಲಿಸುತ್ತಿದ್ದಾರೆ. ನಾನು ಇತ್ತೀಚೆಗೆ ಸಾವಿನ ನಂತರದ ಜೀವನದ ಕುರಿತು ಹಲವಾರು ವೈದ್ಯರು, ಸಂಶೋಧಕರು ಹಾಗೂ ವ್ಯಕ್ತಿಗಳನ್ನು ಸಂದರ್ಶಿಸಿ ಲೇಖನವನ್ನು ಬರೆದಿದ್ದೆ. ಅವರೆಲ್ಲರೂ ಈ ವಿಚಾರದ ಪ್ರಾಯೋಗಿಕ ಮಾಹಿತಿಗಳನ್ನು ಕಲೆಹಾಕುತ್ತಿದ್ದರು. ಅವರ ಸಂಶೋಧನೆಯ ಪ್ರಕಾರ, ಬೈಬಲ್ ಹೇಳುವಂತೆ ಜನರು ಸಾವಿನ ನಂತರ ಪುನರ್ಜನ್ಮ, ಮುಕ್ತಿ, ಮೋಕ್ಷ ಪಡೆಯುವುದಿಲ್ಲ, ಬದಲಾಗಿ ಯಾತನಾಮಯ ನರಕ ಅಥವಾ ಸ್ವರ್ಗಸುಖವನ್ನು ಅನುಭವಿಸುತ್ತಾರೆ

jesusandjews.com/wordpress/2009/10/29/is-hell-real/

ಹಿಂದೂ ಧರ್ಮ, ದುಷ್ಟಶಕ್ತಿಗಳ ಸಮಸ್ಯೆಗಳನ್ನು ಮತ್ತು ಈ ಸತ್ಯದ ಸರಮಾಲೆಗಳನ್ನು ಗುರುತಿಕೊಂಡಿದೆ ಎಂದು ನಾನು ನಂಬುತ್ತೇನೆ. ಆದರೆ ಮರಣಾನಂತರ ವಿಚಾರಗಳ ಕುರಿತು ನಾನು ಮೊದಲೇ ಬೈಬಲ್ ದಾಖಲೆಗಳನ್ನು ದಾಖಲಿಸಿದ ಮಾಹಿತಿಗಳಿಗಿಂತ ಅವರ ದೃಷ್ಠಿಕೋನಗಳು ವಿಭಿನ್ನವಾಗಿದೆ.

ರೋಮನ್ 1 ಮತ್ತು 2 ರಲ್ಲಿ, ದೇವರು ಜನರಿಗೆ ನೈತಿಕ ದಿಕ್ಸೂಚಿಯನ್ನು ನೀಡಿರುವ ಉಲ್ಲೇಖವಿದೆ. ಈ ದಿಕ್ಸೂಚಿ, ನಮ್ಮ ಮುಖಪುಟದಲ್ಲಿ ಗಟ್ಟಿಯಾಗಿದ್ದು, ಆಧ್ಯಾತ್ಮಿಕ ವಾಯುಭಾರ ಮಾಪಕದಂತೆ, ನಮ್ಮ ಸರಿ-ತಪ್ಪುಗಳನ್ನು ನಮಗೆ ತೋರಿಸುವ ಮೂಲಕ ಪಾಪ ಹಾಗೂ ನ್ಯಾಯದ ಕುರಿತು ನಮ್ಮನ್ನು ಎಚ್ಚರಿಸುತ್ತದೆ. ಈ ಜ್ಞಾನವು ಸಾಮಾನ್ಯವಾಗಿದೆ. ಮತ್ತು ಇದು ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ಆದರೂ, ಇದು ನಮ್ಮ ನೈತಿಕ ಸಂದಿಗ್ಧತೆಗಿಂತ ಹೊರತಾಗಿ, ಕ್ರಿಶ್ಚಿಯನ್ ನಂಬಿಕೆ ಮತ್ತು ಹಿಂದೂ ವಿಚಾರಗಳನ್ನು ತುಲನೆ ಮಾಡಿ ಇವರೆಡರ ನಡುವಿನ ವಿಚಾರ ಬಿನ್ನಾಭಿಪ್ರಾಯ, ಸಹಜ ಬುದ್ಧಿವಂತಿಕೆಯನ್ನು ತೋರ್ಪಡಿಸುತ್ತದೆ.

ಒಬ್ಬ ವ್ಯಕ್ತಿ ಒಮ್ಮೆ ಸಾಯುವುದನ್ನು ಮತ್ತು ಅನಂತರ ನ್ಯಾಯ ಪಡೆಯುವುದನ್ನು ಬೈಬಲ್ ಬೆಂಬಲಿಸುತ್ತದೆ. ಆದರೆ ಹಿಂದೂಗಳು ಆತ್ಮ ದೇಹಾಂತರ ಆಗುವುದರ ಮೂಲಕ ಅವರವರ ಕರ್ಮಕ್ಕನುಗುಣವಾಗಿ, ಇನ್ನೊಂದು ಜೀವನವನ್ನು ನವೀಕರಣ ಮಾಡಿಕೊಳ್ಳುತ್ತಾನೆ ಎಂದು ನಂಬುತ್ತಾರೆ.

ನಾನು ನೋಡಿದ ಹಾಗೆ ಹಿಂದೂ ಧರ್ಮದ ಪ್ರಾಪಂಚಿಕ ದೃಷ್ಠಿಕೋನದಲ್ಲಿರುವ ಸಮಸ್ಯೆಗಳೆಂದರೆ, ಮಾನವ ಜೀವನದ ಪಾವಿತ್ರ್ಯತೆ ಸಂಘರ್ಷ ಅಥವಾ ವಿರೋಧಾತ್ಮಕತೆ, ಕೆಲವೊಂದು ಪ್ರಾಣಿಗಳನ್ನು ಮತ್ತು ಮರಗಳನ್ನು ಮನುಷ್ಯರಿಗಿಂತ ಚೆನ್ನಾಗಿ ನೋಡಿಕೊಳ್ಳುವುದನ್ನು, ಗೌರವ ನೀಡುವುದನ್ನು ನೋಡಿದ್ದೇನೆ. ಭಾರತದ ಜನಸಂಖ್ಯೆಯ ಐದನೇ ಒಂದರಷ್ಟಿರುವ ದಲಿತರು ಅಥವಾ ಅಸ್ಪೃಶ್ಯರು ಎಂದು ಹಣೆಪಟ್ಟಿ ನೀಡಿರುವ ಮತ್ತು ವರ್ಗೀಕರಿಸಿರುವ ಜನರನ್ನು ನಾನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಈ ರೀತಿಯ ವರ್ಣಭೇದಗಳು ಕೆಲವೊಂದು ಸಂದರ್ಭಗಳಲ್ಲಿ ಸರಕಾರ ನಿಷೇಧಿಸಿರುವ ಜೀತಪದ್ಧತಿಯಂತೆ ಗೋಚರಿಸುತ್ತದೆ. ಆದರೆ, ಭಾರತೀಯ ಸಮಾಜದಲ್ಲೇ, ಹೆಚ್ಚಿನ ಸಂಖ್ಯೆಯ ಹಿಂದೂ ಜನರು ಇದನ್ನು ಗೊತ್ತಿದ್ದೇ ಬೆಂಬಲಿಸುತ್ತಿದ್ದಾರೆ.

ನೈಜ ಲೋಕದಲ್ಲಿ, ಈ ಧಾರ್ಮಿಕ ದಬ್ಬಾಳಿಕೆ, ರಾಜಕೀಯ ಹಿಡಿತವನ್ನು ಪಡೆಯಲು ಸಹಾಯಕವಾಗಿದೆ. ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಈ ಜನರು ಮೇಲ್ವರ್ಗದವರ ಅಡಿಯಾಳಾಗಿ, ಅವರ ಮನೆಗೆಲಸ ಮಾಡುತ್ತಾ, ಅವರ ಸಂಸ್ಕೃತಿಯ ಯಶಸ್ಸಿಗೆ ಸಹಕರಿಸುತ್ತಾರೆ. ಆದ್ದರಿಂದ ಕೆಳವರ್ಗದ ಜನರ ಕುರಿತಾಗಿ ಈ ರೀತಿಯ ದಬ್ಬಾಳಿಕೆ, ಅವಮಾನಕರ ದುರ್ವರ್ತನೆಯನ್ನು ಸರಕಾರ ಒಂದು ಅಗತ್ಯ ದುಷ್ಟ ಎಂದು ಸಹಿಸಿಕೊಳ್ಳಬಹುದು.

ಈ ಜನರು ತಮ್ಮ ಪೂರ್ವಜನ್ಮದ ಕರ್ಮದ ಫಲವಾಗಿ ಕೆಳಸ್ತರದಲ್ಲಿ ಪುರ್ನಜನ್ಮ ಪಡೆದು ದಬ್ಬಾಳಿಕೆಯ ವಿಧಿಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಜೀವಿಗೂ ಹಿಂಸೆ ಮಾಡಬಾರದು ಎಂದು ಅಹಿಂಸಾವಾದವನ್ನು ಪ್ರತಿಪಾದಿಸುವ ಹಿಂದೂ ಧರ್ಮ ಈ ದಬ್ಬಾಳಿಕೆಯನ್ನು ಹೇಗೆ ಕಡೆಗಣಿಸಿದೆ ಎಂದು ನನಗೆ ಆಶ್ಚರ್ಯವಾಗುತ್ತದೆ.

ಕ್ರಿಶ್ಚಿಯನ್ ಮಿಷನರಿಗಳು ದಲಿತರ ಬಳಿ ಸಾಗಿ, ಕ್ರಿಸ್ತನ ಪ್ರೀತಿಯನ್ನು, ಎಲ್ಲಾ ಮಾನವರಿಗೆ ದೇವರು ದಯಮಾಡಿರುವ ಜೀವನ ದಾರಿಯನ್ನು ಅವರಿಗೆ ತೋರಿಸಿವೆ. ಆದರೆ ಅಹಿಂಸಾ ಪ್ರತಿಪಾದಕ ಹಿಂದೂಗಳು ಈ ವಿಷಯದ ಬಗ್ಗೆ ದಂಗೆದ್ದು, ಕ್ರಿಶ್ಚಿಯನ್ ದಲಿತರು ಹಾಗೂ ಮಿಷನರಿಗಳಿಗೆ ದಾಳಿ ಮಾಡಿ ಹಾನಿಯುಂಟುಮಾಡಿದ್ದಾರೆ.

ಅವರು ಏನು ಹೇಳುತ್ತಾರೆ ಎಂದರೆ, ತಮ್ಮ ವ್ಯವಸ್ಥೆಯ ನಿರ್ವಹಣೆ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದಾರೆ ಮತ್ತು ಆ ಹಿಡಿತವನ್ನು ಹಿಂದೆ ಪಡೆಯಲು ಅವರು ಹಿಂಸೆ ಹಾಗೂ ಭಯದ ತಂತ್ರವನ್ನು ಅನುಸರಿಸಿದ್ದಾರೆ. ಇದು ಅವರ ಶಾಂತಿಪ್ರಿಯ ಧಾರ್ಮಿಕ ವಿಚಾರಧಾರೆಗಳಿಗೆ ವಿರೋಧಭಾಸವಾಗಿ ಗೋಚರಿಸಿದೆ.

ಕೆಲವು ಹಿಂದೂಗಳಿಗೆ ಅಹಿಂಸೆ ಎಂದರೆ ಮಾಂಸಾಹಾರ ವರ್ಜನೆ ಹಾಗೂ ತ್ಯಾಗ. ಆದರೆ ಹಿಂದೂ ದೇವತೆಗಳನ್ನು ಸಂಪ್ರೀತಗೊಳಿಸಲು, ಈ ಕೆಳವರ್ಗದ ಜನರನ್ನು ಮುಖ್ಯವಾಹಿನಿಯಿಂದ ತ್ಯಜಿಸುವುದು ನ್ಯಾಯವೇ? Also another ಇನ್ನೊಂದು ಕಿತ್ತಾಟದ ಅಂಶವೆಂದರೆ, ಮಾನವ ಜೀವನ ಅನಂತತೆ ಎಂಬ ಹಿಂದೂ ಧರ್ಮದ ತಪ್ಪು ಕಲ್ಪನೆ. ಮತ್ತೊಂದೆಡೆ ಸೀಮಿತ ಭೂಮಿಯ ಪರಿಕಲ್ಪನೆಯನ್ನು ಹಿಂದೂ ಧರ್ಮ ಪ್ರತಿಪಾದಿಸುತ್ತದೆ. ವೈಜ್ಞಾನಿಕವಾಗಿಯೂ ಈ ಸೀಮಿತತೆಯ ಅರಿವನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಹಾಗೂ ಇತರ ಉಪಕರಣಗಳನ್ನು ಬಳಸಿ ಅರ್ಥೈಸಿದ್ದಾರೆ. ಅದನ್ನು “ಬಿಗ್ ಬ್ಯಾಂಗ್ “ಎನ್ನುತ್ತಾರೆ.

ಈ ಸೀಮಿತ ಅಸ್ತಿತ್ವದಲ್ಲಿ ಮಾನವನ ಆತ್ಮ ಅನಂತವಾದುದು ಎಂಬ ಅಭಿಪ್ರಾಯ ಅಸಂಬದ್ಧವೇ ಸರಿ.

ಆದ್ದರಿಂದ, ಜೀವನ ಅನಂತತೆಯ ಅವಿಭಾಜ್ಯ ಅಂಗವಾಗಿದ್ದಲ್ಲಿ, ಮೊದಲ ಮಾನವ ಹೇಗೆ ಹುಟ್ಟಿದ? ಅವನಿಗೆ ಪೂರ್ವಜನ್ಮದ ಕರ್ಮದ ಫಲವಿದೆಯೇ? ಅದನ್ನು ಅವನು ಹೇಗೆ ಅನುಭವಿಸಿದ? ಮೊದಲು ಇಲ್ಲದೇ ಇದ್ದವನಿಗೆ ಕರ್ಮದ ಫಲ ಹೇಗೆ ಸಾಧ್ಯ? ಇನ್ನೊಂದು ರೀತಿಯಾಗಿ ಹೇಳುವುದಾದರೆ, ಪೂರ್ವಜನ್ಮದ ಕರ್ಮವೇ ಇಲ್ಲದಿದ್ದಲ್ಲಿ ಮೊದಲ ಹುಟ್ಟಿನ ಅವಶ್ಯಕತೆಯಾದರೂ ಏನು? ದೇವರು ಬಿಗ್ ಬ್ಯಾಂಗ್ ಅರಿತಿದ್ದಾನ? ಮತ್ತು ನಾವು ಆತನನ್ನು ಹಿಂದಕ್ಕೆ ಕಳುಹಿಸಿ ಮೋಕ್ಷದ ಹಾದಿ ತೋರಿಸಬೇಕಿದೆಯೆ?

ಹುಟ್ಟು ಕರ್ಮಚಕ್ರದ ಫಲವಾದರೆ, ಮೊದಲ ಹುಟ್ಟಿಗೆ ಕಾರಣವಾದ ಕರ್ಮ ಯಾವುದು? ಆರಂಭಿಕ ಜೀವನ ಹೇಗಿತ್ತು? ಹುಟ್ಟಿನ ಆರಂಭಕ್ಕೆ ಸಾಕ್ಷ್ಯಗಳು ಇವೇ ಕೇಳುತ್ತವೆ.

ಕರ್ಮಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಚಾರ, ಪೂರ್ವಜನ್ಮದಲ್ಲಿ ನಿಮಗೆ ಗೊತ್ತಿಲದೇ ಇರುವ ಕಾರ್ಯಕ್ಕೆ ಈಗ ನೀವು ಹೇಗೆ ಬಾಧ್ಯಸ್ಥರಾಗುತ್ತೀರಿ? ಪೂರ್ವಜನ್ಮದ ಪಾಪವನ್ನು ಸಮಾಧಾನಗೊಳಿಸುವಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ ಎಂದು ನಿಮಗೆ ತಿಳಿಯಲು ಸಾಧ್ಯವೇ? ಒಬ್ಬ ಬಂದಿದ್ದು ಎಲ್ಲಿಂದ, ಎಲ್ಲಿಗೆ ಹೋಗುತ್ತಿದ್ದಾನೆ ಮತ್ತು ಅಂತಿಮವಾಗಿ ಎಲ್ಲಿಗೆ ತಲುಪುತ್ತಾನೆ ಎಂಬುದು ಯಾರಿಗೆ ಗೊತ್ತು? ಇದು ಒಬ್ಬ ಮನುಷ್ಯನನ್ನು ನಿರಾಶವಾದ ಅಥವಾ ಅಸಹಾಯಕತೆಗೆ ತಳ್ಳುತ್ತದೆ. ಕೊನೆಯಲ್ಲಿ ತುಂಬಾ ಕಷ್ಟಕರವಾದ ಮೋಕ್ಷವನ್ನು ಪಡೆಯುವ ನಿರ್ಣಾಯಕ ಯೋಜನೆಯಿಂದ ಹೊರ ಉಳಿದುಬಿಡುತ್ತಾನೆ.

ಕೆಳಸ್ತರದಲ್ಲಿ ಪುನರ್ಜನ್ಮ ಪಡೆದ ಕ್ರಿಮಿಕೀಟಗಳ ಜೀವನ ಎಷ್ಟು ಅಸಹಾಯಕವಾಗಿರಬಹುದು? ಅವುಗಳಿಗೆ ತಮ್ಮ ಪಾಪ ನಿವಾರಿಸಿಕೊಳ್ಳಲು ಕರ್ಮ-ಕರ್ತವ್ಯಗಳನ್ನು ಮಾಡುವ ಯೋಗವೇ ಇಲ್ಲ. ಒಂದು ಚರಂಡಿಯಲ್ಲಿ ತಮ್ಮ ಭವಿಷ್ಯವನ್ನು ಹುಡುಕುವ ಬಡಪಾಯಿಗೆ ಯಾವ ನಂಬಿಕೆಗಳು ಇದ್ದಾವು?

ಭಾರತೀಯ ಸಂಸ್ಕೃತಿ ಉತ್ಕೃಷ್ಠ ಮತ್ತು ಗುರುಪರಂಪರೆಯಿಂದ ವಿಶ್ವದ ಅತ್ಯುಚ್ಛ ಸ್ಥಾನದ ಆಧ್ಯಾತ್ಮ ಕೇಂದ್ರವಾಗಿದ್ದರೆ, ಪ್ರಬುದ್ಧ ಸಮಾಜದ ಲೆಕ್ಕಾಚಾರದಲ್ಲಿ, ಭಾರತದಲ್ಲಿ ಇಷ್ಟೊಂದು ಕರ್ಮದ ಪಾತಕಿಗಳಿದ್ದಾರೆ? ಜಗತ್ತಿನ 2/3 ಭಾಗದಷ್ಟು ಕುಷ್ಠರೋಗಿಗಳು, 50 ಶೇಕಡಾಕ್ಕಿಂತಲೂ ಅಧಿಕ ಕುರುಡರು ಭಾರತದ ಈ ನಂಬಿಕೆಯ ಅಧಿಕೇಂದ್ರದಲ್ಲಿ ನೆಲೆಸಿದ್ದಾರೆ.

ಕೊನೆಯದಾಗಿ, ಮೋಕ್ಷದ ಆಶಯವನ್ನು ಬೋಧಿಸಿದ ಗುರುಗಳಿಂದ ಮಾರ್ಗದರ್ಶನ ಪಡೆದ, ಹಿಂದೂ ಧರ್ಮದ ಅಮೂಲ್ಯ ರಥವನ್ನು ಎಳೆಯುತ್ತಿರುವ ಆರಾಧಕರ ಭಾರವನ್ನು ಸಹಿಸಲು, ನಂಬಿಕೆಯ ಈ ಮುರಿದ ಚಕ್ರದಿಂದ ಸಾಧ್ಯವೇ ಇಲ್ಲ ಎಂದು ನನಗೆ ಕಾಣುತ್ತಿದೆ.

ಈ ಇಡೀಯ ವ್ಯವಸ್ಥೆ, ಕೇವಲ ಭ್ರಮೆಯ ಮರೀಚಿಕೆ ಅಥವಾ ಮಾಯೆ, ಇದು ಒಬ್ಬ ಮನುಷ್ಯ ಅಂತಿಮವಾಗಿ ಮೋಕ್ಷ ಪಡೆ ಅಂಬ ತತ್ವಶಾಸ್ತ್ರವನ್ನು ಹೇಳುತ್ತಾ ಆತನಿಗೆ ಮೋಸ ಮಾಡುತ್ತದೆ.

ಅಂತಿಮವಾಗಿ, ನಾನು ತುಂಬಾ ಕಟು ವಿಚಾರಗಳನ್ನು ಹೇಳಿದ್ದೇನೆ ಎಂದು ನನಗೆ ತಿಳಿದಿದೆ. ನನ್ನ ಹಿಂದೂ ಸ್ನೇಹಿತರಿಗೆ ಅಗೌರವ ತೋರಿಸುವ ಆಶಯ ನನಗಿಲ್ಲ. ಆದರೆ, ತಮ್ಮ ಧಾರ್ಮಿಕ ವ್ಯವಸ್ಥೆಯ ನಂಬಿಕೆಗಳನ್ನು ಅವಲೋಕಿಸಲು, ಅವರ ನಂಬಿಕೆ ಹಾಕಿರುವ ಸಾಂಸ್ಕೃತಿಕ ಗಡಿಯಿಂದ ಹೊರಗೂ ನೋಡಿ ಎಂದು ನಾನು ಅವರಿಗೆ ಸವಾಲನ್ನು ನೀಡುತ್ತಿದ್ದೇನೆ. ಈ ಬರಹದಿಂದ ಯಾರಿಗಾದರೂ ನೋವಾಗಿದ್ದಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ಆಕ್ರಮಣಕಾರಿಯಾಗಿ ಗೋಚರಿಸದೆ, ಸವಾಲು ಮಾಡುವುದು ಸುಲಭಸಾಧ್ಯವಲ್ಲ. ನೀವು ನಿಮ್ಮ ಆಧ್ಯಾತ್ಮದ ಪ್ರಯಾಣದಲ್ಲಿ ಸ್ವಲ್ಪ ಸಮಯವನ್ನು ನಿಮ್ಮ ನಂಬಿಕೆಗೆ ಸಂಬಂಧಿಸಿದ ಸತ್ಯದ ಮಾನ್ಯತೆಯನ್ನು ಪರಿಶೀಲಿಸುತ್ತೀರಿ ಎಂದು ನಾನು ನಂಬಿದ್ದೇನೆ.

ಕೊನೆಯಲ್ಲಿ, ಜೀಸಸ್ ದಯಮಾಡುವ ಬದುಕು ಎಲ್ಲಾ ಜನರಿಗೂ ಇದೆ ಎಂದು ನಾನು ನಂಬಿದ್ದೇನೆ. ಇದು ಧಾರ್ಮಿಕ ಕಟ್ಟಳೆಗಳ ಮೂಲಕವಲ್ಲ,ಬದಲಾಗಿ ಆತನ ಜನರನ್ನು ನಂಬುವುದರ ಸರಳತೆಯ ಮೂಲಕ ಮತ್ತು ನಿಮ್ಮ ಆತ್ಮದ ಶೂನ್ಯತೆಯಿಂದ ನಿಮ್ಮನ್ನು ಸ್ವತಂತ್ರಗೊಳಿಸುವುದರ ಮೂಲಕ ಹಾಗೂ ಪುನರ್ಜನ್ಮದ ಕಲ್ಪನೆಯಿಂದ ಹೊರಬಂದು, ಜಾಗೃತವಾಗಿ ತಪ್ಪನ್ನು ಖಂಡಿಸಿ ನೀವು ಹೊಸಜನ್ಮವನ್ನು ಪಡೆಯಬಹುದು.

ಜೀಸಸ್ ಇಲ್ಲಿ ಏನು ಹೇಳಿದ್ದಾನೆಂದರೆ, ಮತ್ತಾಯನು 11:28-30 28 “ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.. 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 

 
ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

Hinduism and Reincarnation

 

 

 

Copyright permission by Random House Inc./Multnomah on New Birth or Rebirth by Ravi Zacharias

ಹಿಂದುತ್ವದ ದೇವರುಗಳು?

Wednesday, December 3rd, 2014

ಹಿಂದೂ ಧರ್ಮದಲ್ಲಿ ದೇವರ ಪರಿಕಲ್ಪನೆ ಕುರಿತು ಒಬ್ಬ ಮನುಷ್ಯನಿಗೆ ವಿವಿಧ ದೃಷ್ಟಿಗಳಿವೆ. ಆತನ ನಂಬಿಕೆ ದೇವರೇ ಇಲ್ಲ ಎಂಬಲ್ಲಿಂದ, ಒಬ್ಬ ದೇವರು ಎಂಬಲ್ಲಿಗೆ, ಅಲ್ಲಿಂದ, ತುಂಬಾ ದೇವರು ಅಂದರೆ 33ಕೋಟಿ ದೇವರು ಎಂಬಲ್ಲಿಗೆ ತಲುಪುತ್ತದೆ. ದೇವ(ರು) ಕುರಿತಾದ ಈ ವೈವಿಧ್ಯಮಯ ವಿಚಾರದಲ್ಲಿ ದೈವಾಂಶ ಸಂಭೂತನ ಲಕ್ಷಣಗಳ ಕುರಿತು ಬಹುವಿಧದ ಆಯಾಮಗಳು ಸಿಗುತ್ತವೆ. ಇದು ಏಕತತ್ವವಾದ, ಅದ್ವೈತವಾದ, ವೈಷ್ಣವವಾದ ಹಾಗೂ ಸರ್ವಸಜೀವತ್ವಾದವನ್ನು ಒಳಗೊಂಡಿರುತ್ತದೆ.

ದೇವರ ಕುರುಹಿಗಾಗಿ ಈ ನಂಬಿಕೆಗಳನ್ನು ಪರಿಶೀಲಿಸಿದಾಗ, ಈ ವಿಚಾರಗಳ ಕುರಿತ ಲೆಕ್ಕಾಚಾರಗಳು ಅಸಂಬದ್ಧವಾಗಿರುವ ವಿವಾದಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಆದ್ದರಿಂದ, ಇಂತಹ ಬಹುಸ್ವರೂಪಿ ದೃಷ್ಠಿಕೋನವನ್ನು ಸ್ವೀಕರಿಸುವುದೆಂದರೆ, ಹಿಂದೂ ಸಮಾಜದಲ್ಲಿ ಸಂಘಟನೆ ಮಾಡುವುದು ಅಥವಾ ಸರಿಹೊಂದಿಸುವುದು. ಇಲ್ಲಿ ‘ಎ’ ಅಥವಾ ‘ಎ’ ಅಲ್ಲದಿರುವುದು ಎರಡೂ ಕೂಡ ಲೆಕ್ಕಾಚಾರದಲ್ಲಿ ಸರಿ ಅಥವಾ ಸಮರ್ಪಕ, ಹೇಗೆಂದರೆ ವಾಸಯೋಗ್ಯವಲ್ಲದ ಮತ್ತು ಬಾಳಲಾಗದಂತಹ ವಿಚಾರದ ಆಧಾರಕ್ಕೆ ದೇವರು ಬರುತ್ತಾನೆ. ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಒಬ್ಬ ತನ್ನ ದಿನಚರಿಯಲ್ಲಿ ಜಾತ್ಯಾತೀತ ಬದುಕನ್ನು ನೈಜತೆಯ ಬಯಕೆಯೊಂದಿಗೆ, ಕಾನೂನಿನ ಕಾರಣವನ್ನು ನೀಡುತ್ತಾ ಹೇಗೆ ಜೀವನ ಮಾಡುತ್ತಾನೆ ಎಂಬುದನ್ನು ಅರಿಯಬಹುದು.

ಬುಡಕಟ್ಟು ಜನಾಂಗದ ನಂಬಿಕೆಯಲ್ಲಿ, ಪೌರಾಣಿಕ ಹಿನ್ನಲೆಯಲ್ಲಿ ಅಥವಾ ಐತಿಹಾಸಿಕ ಚರಿತ್ರೆಯಲ್ಲಿ ಹಿಂದೂ ಧರ್ಮದ ದೇವರುಗಳನ್ನು ಕೂರಿಸಲಾಗಿದೆ. ಈ ಕಾರಣಕ್ಕಾಗಿ ಹಿಂದೂ ಧರ್ಮದ ದೇವರ ಪರಿಕಲ್ಪನೆಯನ್ನು ರುಜುವಾತು ಮಾಡಲಾಗದು ಅಥವಾ ದಂತಕತೆಗಳ ಮೂಲಕ, ನಂಬಿಕೆ ಹಾಗೂ ಮೂಢನಂಬಿಕೆಗಳ ತಳಹದಿಯಲ್ಲಿ ಅದರ ಅಸ್ತಿತ್ವ ಇರುವುದರಿಂದ, ಅದನ್ನು ಸ್ವೀಕರಿಸಲಾಗುವ ವಿಷಯ ಎಂದು ಒಪ್ಪಿಕೊಳ್ಳಲಾಗದು. ಧಾರ್ಮಿಕ ವಿಚಾರಗಳ ನೀತಿಕತೆಗಳು, ಜನಪದ ಹಿನ್ನಲೆ ಹೊಂದಿರದ, ಇಂದು ನಗಣ್ಯವಾಗಿರುವ ಈಜಿಪ್ಟ್, ಗ್ರೀಕ್, ರೋಮನ್ ಮತ್ತು ಜರ್ಮನಿ ಅಥವಾ ಸ್ಲಾವಿಕ್ ನಾಗರಿಕತೆಗಳ ಇತರೆ ಪುರಾತನ ಧರ್ಮಗಳ ಜೊತೆಯಲ್ಲಿ ಹಿಂದೂ ಧರ್ಮವನ್ನು ತುಲನೆ ಮಾಡಿ ಇದನ್ನು ರುಜುವಾತು ಮಾಡಬಹುದು.

ದೇವರ ಪುರಾಣಗಳು ಭಾವನಾತ್ಮಕವಾಗಿ ಶಕ್ತಿಯುತವಾಗಿದ್ದು, ಜನರನ್ನು ಸಂಪರ್ಕಿಸುವ ಒಂದು ವಿಸ್ಮಯದೊಂದಿಗೆ, ಇತರರನ್ನು ಸಂಪ್ರದಾಯ, ಸಾಂಸ್ಕೃತಿಕ ಪರಿಸರದಲ್ಲಿರುವ ಕೆಲವು ಪ್ರಮುಖ ಅಲೌಕಿಕ ನೈಜತೆಯನ್ನು ಕರ್ತವ್ಯದ ಪ್ರಜ್ಞೆಯ ಹೆಸರಿನಲ್ಲಿ ಇದು ಆಕರ್ಷಿಸುತ್ತವೆ. ಕಾಲ ಸರಿದಂತೆ, ಇವೆಲ್ಲ ವಿಶ್ವಾಸಾರ್ಹವಲ್ಲದ, ಕಾಲ್ಪನಿಕ, ಅತಾರ್ಕಿಕ ಎಂದು ನಿರೂಪಿತವಾಗಿದ್ದರೂ, ಧರ್ಮದ ಅಧಿಕಾರವಾಣಿಯಿಂದ, ವ್ಯಕ್ತಿ, ಕುಟುಂಬ, ಕುಲ ಹಾಗೂ ದೊಡ್ಡಮಟ್ಟದಲ್ಲಿ ಸಮಾಜದ ಮೇಲೆ ಪರಿಣಾಮ ಬೀರಿವೆ. ಈ ನಂಬಿಕೆಗಳು ಇಂದು ಕೂಡ ಜೀವಂತವಾಗಿರಲು ಅಥವಾ ಅಸ್ತತ್ವದಲ್ಲಿರಲು ಸಮಾಜದಲ್ಲಿ ಬೀಡುಬಿಟ್ಟಿರುವ ಹಲವಾರು ಅಂಶಗಳು ಗೋಚರಿಸುತ್ತವೆ. ಈ ನಂಬಿಕೆಗಳೇ ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಎಂಬ ಮೌಢ್ಯತೆ ಜನರಲ್ಲಿದೆ. ಇದೇ ಅವರಿಗೆ ಭದ್ರತೆ ನೀಡುತ್ತದೆ ಎಂಬ ಹುಸಿ ಭಾವನೆ ಅವರಲ್ಲಿದೆ. ಇಂತಹ ಹಲವಾರು ಉದಾಹರಣೆಗಳನ್ನು ಕ್ರೀಡಾ ತಂಡಗಳಲ್ಲಿ, ರಾಜಕೀಯ ಪಕ್ಷಗಳಿಗೆ ಜನರು ತಮ್ಮನ್ನು ತಾವೇ ಸಮರ್ಪಿಸಿಕೊಂಡು, ಅದು ಎಂತಹುದೇ ಆಗಿರಲಿ ತಮ್ಮ ತಂಡ ಅಥವಾ ಪಕ್ಷವನ್ನು ಬಹಳವಾಗಿ ನಂಬುವ ಮನಸ್ಥಿತಿಯಲ್ಲಿರುತ್ತಾರೆ. ನಾಜಿಯಿಸಂ ದೃಷ್ಠಿಯಲ್ಲಿ ಸಂಸ್ಕೃತಿ ಹಾಗೂ ಸಮಾಜವನ್ನು ತಮ್ಮ ಜೀವನ ಸಿದ್ಧಾಂತಕ್ಕೆ ಬೇಕಾದಂತೆ ತಿರುಚಿದಂತೆ, ಇದು ಕೂಡ ವಂಚನೆಯಾಗಿದೆ. ಆದ್ದರಿಂದ ತತ್ವಶಾಸ್ತ್ರದ ಪ್ರಕಾರ ಎಲ್ಲರೂ ತಪ್ಪಾಗಿರಲು ಸಾಧ್ಯ, ಆದರೆ ಎಲ್ಲರೂ ಸರಿಯಾಗಿರಲು ಖಂಡಿತಾ ಸಾಧ್ಯವಿಲ್ಲ.

ಹೆಚ್ಚಿನ ಜನರಿಗೆ ತಮ್ಮ ದೇವರ ಪರಿಕಲ್ಪನೆಯಲ್ಲಿ ಅಭಾಸವಿರುವುದನ್ನು ಯೋಚಿಸಲೂ ಸಾಧ್ಯವಿಲ್ಲ. ಅದನ್ನು ಅವಲೋಕಿಸುವ, ಸಮರ್ಥಿಸುವ ಸಾಮರ್ಥ್ಯವೂ ಅವರಲಿಲ್ಲ. ಆದ್ದರಿಂದ,
ಇತರರು ಈ ವಿಚಾರವನ್ನು ಸಮರ್ಥಿಸಿದಾಗ, ತಮ್ಮ ಗೌರವದ ವಿಷಯದಲ್ಲಿ ಅದನ್ನು ಒಪ್ಪಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನು ನನ್ನ ಹಿಂದೂ ಸ್ನೇಹಿತರ ನನ್ನ ಕಾಳಜಿಯಿಷ್ಟೆ. ಸಂಸ್ಕೃತಿಯ ಗಡಿಯನ್ನು, ಸಾಮಾಜಿಕ ನೀತಿ-ನಿಯಮಗಳನ್ನು, ವಸ್ತುವನ್ನು ಆಧರಿಸಿದ ಜನಪ್ರೀಯತೆಗೆ ಅವಕಾಶ ನೀಡಬೇಡಿ. ಅದರ ಬದಲಾಗಿ, ಜೀವನದ ಮತ್ತೊಂದು ಮಗ್ಗುಲಿಗೆ ಸಾಗಿಸಿದರೂ, ಬದುಕಿನಲ್ಲಿ ಸತ್ಯಕ್ಕೆ ಮಾತ್ರ ಜಾಗ ನೀಡಿ. ಸತ್ಯದ ಹಾದಿಯಲ್ಲಿ ನಡೆಯಿರಿ. ಈ ಹಾದಿಯಲ್ಲಿ ಒಂಟಿಪ್ರಯಾಣ ಮಾಡಬೇಕಾಗಿ ಬಂದರೂ ಚಿಂತೆಯಿಲ್ಲ, ಹೆದರದಿರಿ. ಸತ್ಯಾನ್ವೇಷಣೆಯಲ್ಲಿ ಎದೆಗುಂದದಿರಿ. ಇಲ್ಲದಿದ್ದಲ್ಲಿ, ಸರಿಯಾಗಿ ನಿರ್ದೇಶನ ನೀಡದ, ನಾಶವಾಗುವ ತಪ್ಪುದಾರಿಯಲ್ಲಿ ನೀವು ಸಾಗುವಿರಿ.

ಮತ್ತಾಯನು 7:13-14
13 “ಇಕ್ಕಟ್ಟಾದ ದ್ವಾರದೊಳಗೆ ನೀವು ಪ್ರವೇಶಿಸಿರಿ; ಯಾಕಂದರೆ ನಾಶನಕ್ಕೆ ನಡಿಸುವ ದ್ವಾರವು ಅಗಲವೂ ಮಾರ್ಗವು ವಿಶಾಲವೂ ಆಗಿದೆ. ಅದರೊಳಗೆ ಪ್ರವೇಶಿಸುವವರು ಬಹು ಜನ.. 14 ಜೀವಕ್ಕೆ ನಡಿಸುವ ದ್ವಾರವು ಇಕ್ಕಟ್ಟಾದದ್ದೂ ದಾರಿಯು ಬಿಕ್ಕಟ್ಟಾದದ್ದೂ ಆಗಿದೆ; ಆದದರಿಂದ ಅದನ್ನು ಕಂಡುಕೊಳ್ಳುವವರು ಸ್ವಲ್ಪ ಜನ..

ಕೊನೆಯದಾಗಿ, ಈ ನೇರ ಹಾಗೂ ನಿಷ್ಪಕ್ಷಪಾತ ಬರಹದ ಮೂಲಕ, ನಿಮಗೆ ಅಸಮಧಾನ ಮಾಡಿಲ್ಲ ಎಂದು ನಾನು ಭಾವಿಸಿದ್ದೇನೆ. ಭಕ್ತಿ ಹಾಗೂ ಪಾವಿತ್ರ್ಯ ನಂಬಿಕೆಯನ್ನು ಹೆಚ್ಚಿನವರು ಎತ್ತಿ ಹಿಡಿಯುತ್ತಾರೆ ಎಂಬುದನ್ನು ನಾನು ತಿಳಿದಿದ್ದೇನೆ. ನೀವು ಅದರಲ್ಲಿ ಗಂಭೀರವಾಗಿ ಆಸಕ್ತಿದಾಯಕರಾಗಿರಬಹುದು. ಆದರೆ ಇದು ಗಂಭೀರವಾಗಿ ತಪ್ಪು ಮತ್ತು ಈ ಸಂದರ್ಭದಲ್ಲಿ ನನ್ನ ಹಿಂದೂ ಸ್ನೇಹಿತರಿಗೆ ಪ್ರೀತಿಯಿಂದಲೇ ಸವಾಲೊಡ್ಡುತ್ತಿದ್ದೇನೆ.

ಮುಗಿಸುವಾಗ, ದೇವರ ಕುರಿತು ನಿಮ್ಮಲ್ಲಿ ಸಂಶಯ ಉಳಿಯಲು ನಾನು ಬಯಸುವುದಿಲ್ಲ. ನಾನು ನಿಮಗೆ ಆಮಂತ್ರಣ ನೀಡಲು ಬಯಸುತ್ತೇನೆ. ಆಧ್ಯಾತ್ಮಿಕ ತೊಂದರೆಗಳಿಂದ ಬಳಲುತ್ತಿರುವ ನಿಮಗೆ ಹೆಗಲು ನೀಡುವ “ಒಬ್ಬ”ನಲ್ಲಿ ನೀವು ವರಮಿಸಿ. ದೇವರು ಆಶೀರ್ವದಿಸಲಿ!

ಮತ್ತಾಯನು 11:28-30ಪ್ರಕಾರ ಯೇಸುವು ಹೇಳಿದ್ದಾರೆ
28  ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

god(s) of hinduism?

ಎಲ್ಲಾ ದಾರಿಗಳೂ ದೇವರೆಡೆಗೆ

Tuesday, December 2nd, 2014

ಧರ್ಮಗಳಲ್ಲಿರುವ ಸಾಮ್ಯತೆ ಹಾಗೂ ಒಂದೇ ರೀತಿಯ ಪ್ರತಿಪಾದನೆಗಳು ಎಲ್ಲಾ ಧಾರ್ಮಿಕ ತತ್ವಗಳು ಹಾಗೂ ಆಚರಣೆಗಳನ್ನು ಸಮಾನವಾಗಿಸುತ್ತವೆ ಎಂಬ ತೀರ್ಮಾನಕ್ಕೆ ಕೆಲವು ಜನರು ಬಂದಿರುತ್ತಾರೆ. ನೀರ ಮೇಲಿನ ಈ ವೀಕ್ಷಣೆ, ಟೈಟಾನಿಕ್ ಹಡಗು, ಧಾರ್ಮಿಕ ವೈವಿಧ್ಯತೆ ಎಂಬ ನೀರಿನಲ್ಲಿ ಅತೀಯಾದ ಆತ್ಮವಿಶ್ವಾಸದಿಂದ ಸಾಗುವಾಗ ಹಿಮಗಡ್ಡೆಯ ತುದಿಯನ್ನು ಮಾತ್ರ ನೋಡಲು ಸಾಧ್ಯ. ಅದರಡಿಯಲ್ಲಿರುವ ಗಟ್ಟಿ ಶಿಲಾರೂಪದಲ್ಲಿರುವ ಹಿಮಗಡ್ಡೆ ದೊಡ್ಡ ಮಟ್ಟದ ತೊಂದರೆ ಉಂಟುಮಾಡುತ್ತದೆ ಎಂಬ ಗಂಭೀರ ವಿಷಯವನ್ನು ಅರಿತಿರುವುದಿಲ್ಲ. ಹಾಗಾಗಿ, ಈ ದುರಂತಮಯ, ಮುಳುಗುವ ಹಡಗನ್ನು ಹತ್ತಿದಲ್ಲಿ ಸುರಕ್ಷಿತವಾಗಿ ಮರಳುತ್ತೇನೆ ಎಂಬ ಚಿಂತೆ ಪ್ರಯಾಣಿಕನಿಗೆ ಇಲ್ಲದೆ ಇರುವುದರಿಂದ, ಇದು ಒಡೆದುಹೋಗುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾನೆ.

ಈ ಧಾರ್ಮಿಕ ಜಗತ್ತಿನ ಹೆಚ್ಚಿನ ಆಚರಣೆ, ನಂಬಿಕೆಗಳು ಅನೈತಿಕ ಹಾಗೂ ಸರಿಪಡಿಸಲಾಗದಷ್ಟು ಹಾಳಾಗಿ ಹೋಗಿರುವುದನ್ನು ಗುರುತಿಸುವಲ್ಲಿ ಹೆಚ್ಚಿನ ಜನರು ವಿಫಲರಾಗುತ್ತಾರೆ. ಈ ಒಳಾರ್ಥವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಒಬ್ಬ ವ್ಯಕ್ತಿ, ಇತರೆ ಧರ್ಮ ಹಾಗೂ ನಂಬಿಕೆಗಳನ್ನು ತುಲನೆ ಮಾಡಿ ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಇದು ಸೂರ್ಯನ ಬೆಳಕಿನಂತೆ. ಇದರಿಂದ ಧರ್ಮದ ನಿಜ ಸ್ವರೂಪವನ್ನು ಅರಿತು ಅದರಲ್ಲಿರುವ ಬಹುಮುಖ್ಯ ವ್ಯತ್ಯಾಸಗಳನ್ನು ತಿಳಿದು, ಅದರಿಂದಾಗಬಹುದಾದ ಅಪಾಯದಿಂದ ದೂರ ಉಳಿಯುತ್ತಾರೆ.

ಒಬ್ಬ ಹಿಂದೂ ಇದನ್ನು ಒಂದು ಸಮಸ್ಯೆ ಎಂದು ಹೇಳುವುದಿಲ್ಲ. ಬದಲಾಗಿ, ಇದು ಅವರ ವಿಚಾರಗಳಿಗೆ ಹೊಂದಿಕೊಳ್ಳುತ್ತದೆ, ಹಾಗಾಗಿ ಇದರ ಕುರಿತು ಅವರು ಮಾತನಾಡಲು ಸಿದ್ಧರಿಲ್ಲ. ಯಾಕೆಂದರೆ ಅವರ ದಿನದ ಜೀವನ ತರ್ಕ ಹಾಗೂ ಕಾರಣಗಳ ಪ್ರತಿಬಿಂಬವಾಗಿದೆ. ಇದು ಅವರ ಧರ್ಮದ ನಂಬಿಕೆಗೆ ಹೊಂದಿಕೊಳ್ಳುತ್ತದೆ. ಇದರಲ್ಲಿ ಮೂಲಭೂತವಾದಿ, ರಾಷ್ಟ್ರೀಯವಾದಿ ಹಿಂದೂಗಳು, ಧಾರ್ಮಿಕ ಚಳುವಳಿಗಳನ್ನು ಬೆಂಬಲಿಸುವುದಿಲ್ಲ ಮತ್ತ ಪೂರ್ವದ ಗುರುಗಳು ಪಾಶ್ಚಿಮಾತ್ಯರ ಚಿಂತನೆಯ ದಾರಿಯನ್ನು ಬದಲಾಯಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಪ್ರಾಯೋಗಿಕವಾಗಿ ಹೇಳುವುದಾದರೆ, ಇಂತಹ ಯೋಚನೆ ವಿಕಸನಗೊಂಡಿದ್ದು ಬಹುದೇವತಾ ಆಚರಣೆಗಳ ಗೊಂದಲಗಳ ನಡುವಿನ ಸಮಸ್ಯೆಗಳಿಂದ ಉಂಟಾದ ಒತ್ತಡವನ್ನು ನಿವಾರಿಸಲು ಇರಬಹುದು. ಈ ದಾರಿಗಳ ನಡುವೆ ಸೇತುವೆ ಕಟ್ಟುವ ಪ್ರಯತ್ನದ ಮೂಲಕ ಜೀವನ ಪಥವನ್ನು ಅಗಲೀಕರಿಸುವ ಆಶಯ ಇದ್ದರೂ ಕೂಡ, ಇದರ ಹಿಂದೆ, ಧಾರ್ಮಿಕ ಜಾತ್ಯಾತೀತೆಯ ಮುಖವಾಡ ಹೊಂದಿರುವ ನಾಯಕನ ಅಧೀನದಲ್ಲಿರುವ ಮನಸ್ಥಿತಿಯಾಗಿದೆ.

ಅದಾಗ್ಯೂ, ಕುರುಡ ಹಾಗೂ ಆನೆಯ ನಡುವಿನ ದಂತಕತೆಯನ್ನು ದೇವರ ಪರಿಕಲ್ಪನೆಗೆ ಸಂಬಂದಿಸುವ ಕೆಲಸವನ್ನು ಕೆಲವರು ಪ್ರಯತ್ನಿಸಿದ್ದಾರೆ. ಎಲ್ಲಾ ಮನುಕುಲದಲ್ಲಿ ದೇವರ ಪರಿಕಲ್ಲನೆ ಮುಖ್ಯವಾಹಿನಿಗೆ ನಮ್ಮತನವನ್ನು ತೋರಿಸಲು ಬೇಕಾಗುವ ಜ್ಞಾನದಂತೆ ಸಮಾನವಾಗಿದೆ. ಆದರೆ ಇದು ಸತ್ಯದ ಆಧಾರದಲ್ಲಿ ನೈಜತೆಯೆಡೆಗೆ ಯಾವತ್ತಿಗೂ ನಮ್ಮನ್ನು ಕೊಂಡೊಯ್ಯುವುದಿಲ್ಲ.

ತಾನು ದೇವರನ್ನು ನೋಡಬಲ್ಲೆ ಎಂದು ಹೇಳುವ ಕುರುಡನ ಮಾತು ಸುಳ್ಳು ಅಥವಾ ವಂಚನೆಯೆಂದು ಹೇಳಲಾಗುವುದಿಲ್ಲ. ಈ ರೀತಿಯ ವಸ್ತುನಿಷ್ಠವಾದ ನಿಮ್ಮನ್ನು ದಾರಿ ತಪ್ಪಿಸಬಹುದು. ಏಕೆಂದರೆ, ಒಬ್ಬರ ಗ್ರಹಿಕೆ ಹಲವಾರು ಕಾರಣಗಳಿಗೋಸ್ಕರ ಸರಿಯಿಲ್ಲದಿರಬಹುದು. ಧಾರ್ಮಿಕ ಗುರುಗಳು, ಸನ್ಯಾಸಿಗಳು ಮತ್ತು ಯೋಗಿಗಳು ದುರಹಂಕಾರದಿಂದ, ತಮ್ಮ ಸ್ವಾರ್ಥಸಾಧನೆಗಾಗಿ ಕುರುಡನ ತಲೆಯನ್ನು ಹಾಳು ಮಾಡಿರಬಹುದು.
ಅವರು ದೇವರನ್ನು ಮುಟ್ಟುತ್ತಾರೆ ಎಂದು ಯಾರು ಹೇಳಿದ್ದು? ಇದು ಮೂರ್ತಿಪೂಜೆಯ ಮೂಲಕ ತಾವಾಗಿಯೇ ಕಲ್ಪಿಸಿದ ಕಲೆಯಾಗಿದ್ದು, ತಮ್ಮ ಅವಶ್ಯಕತೆಗೆ ತಕ್ಕಂತೆ ದೇವರನ್ನು ಚಿತ್ರಿಸುವ ವಿಧಾನವಾಗಿದೆ. ಯೇಸುಕ್ರಿಸ್ತ ಈ ಕುರಿತು ಎಚ್ಚರಿಕೆ ನೀಡುತ್ತಾರೆ. ಸುಳ್ಳು ಪ್ರವಾದಿಗಳು ಅಥವಾ ಕುರುಡು ಗುರುಗಳು, ತಾವು ಸ್ವತಃ ದೇವರ ಕುರಿತು ಕುರುಡಾಗಿದ್ದು, ಬೆಳಕಿಲ್ಲದ ದಾರಿಯನ್ನಷ್ಟೇ ತೋರಿಸುತ್ತಾರೆ. ಅದರ ಮೂಲಕ ಅವರು ಹಾಗೂ ಅವರ ಹಿಂಬಾಲಕರು ಖಂಡಿತವಾಗಿಯೂ ಅಡ್ಡದಾರಿಯನ್ನೇ ತುಳಿಯುತ್ತಾರೆ.

ಈ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದು ಇಲ್ಲಿದೆ-

ಮತ್ತಾಯನು 24:24
24 ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು..

ರೋಮಾಪುರದವರಿಗೆ 1:18-23
18 ಸತ್ಯವನ್ನು ಅನೀತಿಯಲ್ಲಿ ತಡೆಹಿಡಿದ ಮನುಷ್ಯರ ಎಲ್ಲಾ ಭಕ್ತಿಹೀನತೆಗೆ ಮತ್ತು ಅನೀತಿಗೆ ವಿರೋಧ ವಾಗಿ ದೇವರ ಕೋಪವು ಪರಲೋಕದಿಂದ ತೋರಿ ಬರುತ್ತದೆ. . 19 ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ. 20 ಹೇಗೆಂದರೆ ಜಗದು ಉತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ. 21 ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು 22 ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು, 23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು.

ಅಂತಿಮವಾಗಿ ಹೇಳುವುದಾದರೆ, ದೇವರ ಕುರಿತಾದ ಎಲ್ಲಾ ವಿಚಾರಗಳು ಮಾನ್ಯತೆಯನ್ನು ಹೊಂದಿವೆ. ಇಲ್ಲಿ ಯಾವುದೇ ಒಂದು ವಿಚಾರವೂ ಕೂಡ ಸಂಪೂರ್ಣವಾಗಿ ಸರಿಯಲ್ಲ, ಎಲ್ಲಾ ವಿಚಾರಗಳು ಸಮವಾಗಿ ಮಾನ್ಯತೆಯನ್ನು ಹೊಂದಿವೆ ಎಂಬ ಮಾತನ್ನು ತಾವಾಗಿಯೇ ಹಿಂದೆ ತೆಗೆದುಕೊಳ್ಳಬೇಕು. ಪ್ರತೀ ನಡತೆಯೂ ಕೂಡ, ಸಣ್ಣ ಮಟ್ಟಿಗೆ ಆದರೆ ದೊಡ್ಡದಾಗಿ ಹಿಂದೂ ಧರ್ಮದ ವಿಶೇಷ ಮತ್ತು ಅನನ್ಯ ವಿಚಾರಗಳನ್ನು ಅವರಾಗಿಯೇ ತೊಂದರೆಗೆ ಸಿಲುಕಿಸುತ್ತಿದ್ದಾರೆ. ಇವೆಲ್ಲವೂ ಬಹುಮುಖ್ಯವಾದುದು. ಇಲ್ಲದಿದ್ದಲ್ಲಿ, ಹಿಂದೂ ಬಾಂಧವರು ಈ ಎಲ್ಲಾ ಸಮಸ್ಯೆ, ಗೊಂದಲಗಳಿಲ್ಲದ ಇನ್ನೊಂದು ತಂಡ ಸೇರಲು ಹಿಂಜರಿಯರು. ಅಥವಾ ದೇವರ ಅನುಭವದ ಮೇರೆಗೆ ತಮಗೆ ಸಂಬಂಧವೇ ಇಲ್ಲದ ಧರ್ಮವನ್ನು ಸ್ವೀಕರಿಸುವರು. ಇನ್ನೂ ಹೇಳಬೇಕೆಂದರೆ, ನಮ್ಮ ಜೊತೆ ಸಣ್ಣ ಸತ್ಯವಿದೆ. ಹಾಗಾದರೆ, ತಾವು ಹೇಳಿದ್ದೆ ಸರಿ, ನಮ್ಮದು ಮಾತ್ರ ಸತ್ಯ ಎಂದು ಹೇಳಲು ಅವರಿಗೆ ಅಷ್ಟೊಂದು ಮಾಹಿತಿಗಳು ಹೇಗೆ ದೊರಕಿದವು ಎಂಬದನ್ನು ನಾವು ಪ್ರಶ್ನಿಸಬೇಕಿದೆ.

ಕೊನೆಯದಾಗಿ, ವಿವಿಧ ನಂಬಿಕೆಗಳು, ನಂಬಿಕೆಯ ವ್ಯವಸ್ಥೆಗಳಿಗೆ ಸ್ಥಾನ ನೀಡುವುದು. ಆದರೆ ಪ್ರತೀ ನಂಬಿಕೆ ಕೂಡ ಮಾನ್ಯ ಹಾಗೂ ಸತ್ಯ ಎಂದು ಇನ್ನೊಬ್ಬರು ಹೇಳುತ್ತಾರೆ. ಧಾರ್ಮಿಕ ಸಹನೆ ಒಂದು ವಿಷಯವಾದರೆ, ಧಾರ್ಮಿಕ ಸಂಶ್ಲೇಷಣೆ, ಸಾಪೇಕ್ಷತಾವಾದ, ಸಮಗ್ರವಾದ ಹಾಗೂ ಸರ್ವಮೋಕ್ಷವಾದ ಇವು ಉಳಿದ ವಿಚಾರಗಳಾಗಿವೆ. ವರ್ಜನೆ ಒಳ್ಳೆಯದೇ. ಆದರೆ ಇದು ಸತ್ಯದ ಗುಣಮಟ್ಟವನ್ನು ಪರಿಹಾರವಲ್ಲ. ಯಾರೊಬ್ಬರು ದೇವರೆಡೆಗೆ ಸಾಗಲು ಇರುವುದು ಒಂದೇ ದಾರಿ ಅಂದಾಗ, ದೇವನೆಡೆಗೆ ನೂರಾರು ನೈಜ ದಾರಿಗಳಿವೆ ಎಂದು ಹೇಳಬಹುದು. ಈ ಸಹನೆ ಎಲ್ಲಾ ವಸ್ತು-ವಿಚಾರಗಳ ಮಾಪನವಲ್ಲ, ಬದಲಾಗಿ ಸತ್ಯ ಹೇಳುವಾಗಿನ ಸಹನೆ ಹಾಗೂ ಮನಪೂರ್ವಕವಾದ ಪ್ರೀತಿ.

ಅಂತಿಮವಾಗಿ, ಬೈಬಲ್ ಹೇಳುವಂತೆ, ಒಂದನ್ನೊಂದು ವಿರೋಧಿಸುವ ಎರಡು ದಾರಿಗಳಿವೆ. ಒಂದು ಅಗಲವಾದ ಹಲವು ರಸ್ತೆಗಳ ದಾರಿ, ಅದು ನಾಶದತ್ತ ಸಾಗುತ್ತದೆ. ಮತ್ತೊಂದು ಕಿರಿದಾದ ಒಂದೇ ರಸ್ತೆ, ಅದು ಬದುಕನ್ನು ಬೆಳಗಿಸುವತ್ತ ಸಾಗಿಸುತ್ತದೆ. ನಮಗೆಲ್ಲರಿಗೂ ನಡೆಯಲು ಕಾಲು ಇರುವಂತೆ, ಪ್ರಯಾಣಿಸಬೇಕಾದ ಮಾರ್ಗದ ಆಯ್ಕೆಯೂ ನಮಗಿದೆ. ನಿಮಗೆ ನನ್ನ ಪ್ರಶ್ನೆಯೇನೆಂದರೆ, ಅಗಲವಾದ ಆದರೆ ಎಲ್ಲಾ ದಾರಿಗಳನ್ನು ಒಟ್ಟಾಗಿಸುವ ಮಾರ್ಗವನ್ನು ಆಯ್ಕೆ ಮಾಡುವಿರಾ ಅಥವಾ ಬದುಕಿನ ದಾರಿಯನ್ನು ತೋರಿಸುವ ಕಿರಿದಾದ ಮಾರ್ಗದಲ್ಲಿ ಸಾಗುವ ಧೈರ್ಯ ತೋರುವಿರಾ? ಯೇಸುಕ್ರಿಸ್ತ ಹೇಳುತ್ತಾರೆ, ನಾನು ಮಾರ್ಗ, ನಾನು ಸತ್ಯ ಮತ್ತ ಜೀವನ. ಹಾಗಾಗಿ ಯೇಸುವಿನ ಪಥವನ್ನು ಬಿಟ್ಟು ಯಾರಿಂದಲೂ ದೇವನೆಡೆಗೆ ಸಾಗಲು ಸಾಧ್ಯವೇ ಇಲ್ಲ. ಕೊನೆಯದಾಗಿ, ಸತ್ಯಕ್ಕಾಗಿ ಕಣ್ಣುಕಾಣದೆ ತಡಕಾಡಲು ದೇವನು ಬಿಡುವುದಿಲ್ಲ. ಬದಲಾಗಿ, ನೀವು ದೇವನನ್ನು ಮನಪೂರ್ವಕವಾಗಿ ನಂಬಿದಲ್ಲಿ ಆತ ನಿಮ್ಮ ಕಣ್ಣನ್ನು ತೆರೆಯಿಸಿ ತನ್ನ ವಿಶೇಷತೆಯನ್ನು ನಿಮಗೆ ತೋರ್ಪಡಿಸುತ್ತಾನೆ.

ಮತ್ತಾಯನು 11:28-30
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29  ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

All Paths Lead to God

ಹಿಂದೂ ಸಂಪನ್ಮೂಲಗಳು

Tuesday, December 2nd, 2014

ರವಿ ಝಖಾರಿಯಸ್ (ಮೂಲತಃ ಹಿಂದೂ ಆಗಿದ್ದವರು)

 

ಯೇಸುವನ್ನು ಸ್ವೀಕರಿಸಿದ ಸಂಪ್ರದಾಯಸ್ತ ಹಿಂದೂ ಬ್ರಾಹ್ಮಣನ ಮಾತುಗಳು

 

ಬೈಬಲ್

 

ನಾಲ್ಕು ಆಧ್ಯಾತ್ಮಿಕ ಕಾಯ್ದೆಗಳು

 
ಜೀಸಸ್ ಸಿನಿಮಾ